
ವಾಷಿಂಗ್ಟನ್ (ಜು.17): ಕೊರೋನಾದಿಂದಾಗಿ ತಾವು ಭಾರತ ಮತ್ತು ಅಮೆರಿಕದಲ್ಲಿ 10 ಮಂದಿ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವ ಸಂಗತಿಯನ್ನು ಮಂಡ್ಯ ಮೂಲದವರಾದ ಅಮೆರಿಕದ ಸರ್ಜನ್ ಜನರಲ್ ಡಾ.ವಿವೇಕ್ ಹಲ್ಲೇಗೆರೆ ಮೂರ್ತಿ ಬಹಿರಂಗಪಡಿಸಿದ್ದಾರೆ.
ಲಸಿಕೆಯ ವಿರುದ್ಧ ಹರಿಬಿಡಲಾಗುತ್ತಿರುವ ತಪ್ಪು ಮಾಹಿತಿಯ ವಿರುದ್ಧ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ವಿವೇಕ್ ಮೂರ್ತಿ, ಮಾರಾಣಾಂತಿಕ ವೈರಸ್ನಿಂದ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಹಿಂಜರಿಕೆ ಬಿಟ್ಟು ಲಸಿಕೆ ಪಡೆಯಬೇಕು ಎಂದು ಅಮೆರಿಕನ್ನರನ್ನು ಒತ್ತಾಯಿಸಿದರು.
ಮಂಡ್ಯ, ಮಡಿಕೇರಿಗೆ ಅಮೆರಿಕದ ಸರ್ಜನ್ ಜನರಲ್ ವಿವೇಕ್ರಿಂದ ಕೋಟಿ ನೆರವು!
ಇದುವರೆಗೆ ಅಮೆರಿಕದಲ್ಲಿ 16 ಕೋಟಿ ಮಂದಿ ಲಸಿಕೆ ಪಡೆದಿರುವುದು ಒಳ್ಳೆಯ ಸಂಗತಿ. ಆದರೆ, ಕೋಟ್ಯಂತರ ಅಮೆರಿಕನ್ನರು ಇನ್ನೂ ಲಸಿಕೆ ಪಡೆದಿಲ್ಲ. ಲಸಿಕೆ ಪಡೆಯದೇ ಇರುವವರಲ್ಲಿ ಸೋಂಕು ಹೆಚ್ಚಳ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಅಮೆರಿಕದ ಸರ್ಜನ್ ಜನರಲ್ ಆಗಿ ವಿವೇಕ್ ಮೂರ್ತಿ ನೇಮಕ!
‘ವೈಯಕ್ತಿವಾಗಿ ಹೇಳುವುದಾದರೆ, ಈಗ ಸಂಭವಿಸುತ್ತಿರುವ ಪ್ರತಿಯೊಂದು ಸಾವನ್ನು ತಡೆಯಬಹುದಾಗಿತ್ತು ಎಂಬ ನೋವು ನನ್ನನ್ನು ಬಾಧಿಸುತ್ತಿದೆ. ಒಂದು ವೇಳೆ ಲಸಿಕೆಯನ್ನು ಪಡೆಯುವ ಅವಕಾಶ ಸಿಕ್ಕಿದ್ದರೆ ಸಾವಿನಿಂದ ಅವರನ್ನು ಪಾರು ಮಾಡಬಹುದಾಗಿತ್ತು. ಕೊರೋನಾಕ್ಕೆ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಯಾರೇ ಆದರೂ ಲಸಿಕೆ ಪಡೆಯಲು ಒಂದೇ ಒಂದು ಅವಕಾಶ ಸಿಗಲಿ ಎಂದು ಪ್ರತಿದಿನವೂ ಬಯಸುತ್ತಾರೆ. ಎರಡು ಮಕ್ಕಳ ತಂದೆಯಾಗಿ ಲಸಿಕೆ ಪಡೆದು ಕುಟುಂಬವನ್ನು ರಕ್ಷಿಸುವುದು ನನ್ನ ಜವಾಬ್ದಾರಿ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ