ನೇಪಾಳ ಪ್ರಧಾನಿಯಾದ ಬೆನ್ನಲ್ಲೇ ಮೊದಲ ಘೋಷಣೆ, ಸುಶೀಲಾ ಕರ್ಕಿ ನಿರ್ಧಾರಕ್ಕೆ ಪೋಷಕರು ಭಾವುಕ

Published : Sep 14, 2025, 01:55 PM IST
Sushila Karki

ಸಾರಾಂಶ

ನೇಪಾಳ ಪ್ರಧಾನಿಯಾದ ಬೆನ್ನಲ್ಲೇ ಮೊದಲ ಘೋಷಣೆ, ಸುಶೀಲಾ ಕರ್ಕಿ ನಿರ್ಧಾರಕ್ಕೆ ಪೋಷಕರು ಭಾವುಕ. ನೇಪಾಳ ಹಂಗಾಮಿ ಪ್ರಧಾನಿಯಾಗಿ ಸುಶೀಲಾ ಕರ್ಕಿ ಅಧಿಕಾರವಹಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ಸುಶೀಲಾ ಕರ್ಕಿ ಮೊದಲ ನಿರ್ಧಾರವೇನು?

ಕಾಠ್ಮಂಡು (ಸೆ.14) ನೇಪಾಳದಲ್ಲಿ ಕೆಪಿ ಶರ್ಮಾ ಒಲಿ ಸರ್ಕಾರ ಪತನಗೊಂಡು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ ಹಂಗಾಮಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನೇಪಾಳದಲ್ಲಿ ಝೆನ್ ಜೀ ನಡೆಸಿದ ಪ್ರತಿಭಟೆಯಲ್ಲಿ ಸರ್ಕಾರ ಪತನಗೊಂಡಿತ್ತು, ನೇಪಾಳದ ಹಲವು ನಾಯಕರು ಪ್ರಾಣ ಭಯದಿಂದ ಓಡಿ ಹೋಗಿದ್ದಾರೆ. ಆಕ್ರೋಶಿತರ ಗುಂಪು ನೇಪಾಳವನ್ನು ಸುಟ್ಟು ಬೂದಿ ಮಾಡಿತ್ತು. ಮಧ್ಯಪ್ರವೇಶ ಮಾಡಿದ ನೇಪಾಳ ಸೇನೆ, ಮಧ್ಯಂತರ ಸರ್ಕಾರ ರಚನೆ ಮಾಡಿದೆ. ಸುಶೀಲಾ ಕರ್ಕಿ ಹೆಸರನ್ನೂ ಝೆನ್‌ ಜಿ ಹೋರಾಟಗಾರರು ಸೂಚಿಸಿದ್ದರು. ಇದರಂತೆ ಸುಶೀಲಾ ಇದೀಗ ಅಧಿಕಾರ ವಹಿಸಿಕೊಂಡು ತಮ್ಮ ಮೊದಲ ನಿರ್ಧಾರ ಘೋಷಿಸಿದ್ದಾರೆ.

ಸುಶೀಲಾ ಕರ್ಕಿ ನಿರ್ಧಾರಕ್ಕೆ ನೇಪಾಳದ ಪೋಷಕರು ಭಾವುಕ

ಸುಶೀಲಾ ಕರ್ಕಿ ಅಧಿಕಾರವಹಿಸಿಕೊಂಡ ಬಳಿಕ ತಮ್ಮ ಮೊದಲ ನಿರ್ಧಾರ ಘೋಷಿಸಿದ್ದಾರೆ. ಇದು ನೇಪಾಳದ ಸರ್ಕಾರವನ್ನು ಬೀಳಿಸುಲ ಝೆನ್ ಝೀ ನಡೆಸಿದ ಹೋರಾಟದ ಕುರಿತಾಗಿದೆ. ಈ ಹೋರಾಟದಲ್ಲಿ ಒಟ್ಟು 51 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಹೋರಾಟಗಾರರೇ ಹೆಚ್ಚು. ಇದೀಗ ಝೆನ್ ಜಿ ಪ್ರತಿಭಟನೆಯಲ್ಲಿ ಮೃತಪಟ್ಟ ಎಲ್ಲಾ ಹೋರಾಟಗಾರರನ್ನು ಹುತಾತ್ಮ ಎಂದು ಪರಿಗಣಿಸಲಾಗುತ್ತದೆ. ಅವರಿಗೆ ಎಲ್ಲಾ ಗೌರವ ಸಿಗಲಿದೆ ಎಂದು ಸುಶೀಲಾ ಕರ್ಕಿ ಹೇಳಿದ್ದಾರೆ.

ಬಾಲಿವುಡ್ ನಟಿ ಇದ್ದ ವಿಮಾನ ಹೈಜಾಕ್ ಕೇಸ್, ಕರ್ಕಿ ನೇಪಾಳ ಪಿಎಂ ಆಗ್ತಿದ್ದಂಗೆ ಮುನ್ನಲೆಗೆ ಬಂದಿದ್ದೇಕೆ?

ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ

ನೇಪಾಳ ಪ್ರತಿಭಟನೆಯಲ್ಲಿ ಮೃತಪಟ್ಟ ಪ್ರತಿಭಟನಾಕಾರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ 1,300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಚಿಕಿತ್ಸೆಗೆ ಎಲ್ಲಾ ನೆರವು ಸರ್ಕಾರ ನೀಡಲಿದೆ ಎಂದು ಸುಶೀಲಾ ಕರ್ಕಿ ಹೇಳಿದ್ದಾರೆ.

ಸಾವು ನೋವು ತೀವ್ರ ನೋವು ತಂದಿದೆ

ಝೆನ್ ಝೀ ಪ್ರತಿಭಟನೆಯಲ್ಲಿ ಹಲವರು ಮೃತಪಟ್ಟಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ತೀವ್ರ ನೋವು ತಂದಿದೆ. ಪ್ರತಿಭಟನೆ ಮಾಡಿದವರ ಮೇಲೆ ಈ ರೀತಿಯ ಕ್ರಮ ಸಲ್ಲದು. ಪ್ರತಿಭಟನೆ ಪ್ರತಿಯೊಬ್ಬರ ಹಕ್ಕು, ನಿಯಂತ್ರಣಕ್ಕೆ ಹಲವ ಮಾರ್ಗಗಳಿವೆ. ಈ ಸಾವು ನೋವು ನೋವು ತಂದಿದೆ ಎಂದು ಸುಶೀಲಾ ಕರ್ಕಿ ಹೇಳಿದ್ದಾರೆ.

ಅಧಿಕಾರಕ್ಕಾಗಿ ಪ್ರಧಾನಿಯಾಗಿಲ್ಲ, ನೇಪಾಳ ಕಟ್ಟಬೇಕು

ನಾನು ಯಾವುದೇ ಅಧಿಕಾರಕ್ಕಾಗಿ ಪ್ರಧಾನಿಯಾಗಿಲ್ಲ. ನಾನು ಪ್ರಧಾನಿಯಾಗಬೇಕು ಎಂದು ಬಯಸಿದ ವ್ಯಕ್ತಿಯೂ ಅಲ್ಲ. ಪರಿಸ್ಥಿತಿ ಪ್ರಧಾನಿಯನ್ನಾಗಿ ಮಾಡಿದೆ. ಮಹತ್ತರ ಜವಾಬ್ದಾರಿ ನೀಡಿದೆ. ಇದೀಗ ನೇಪಾಳದಲ್ಲಿ ಮಡುಗಟ್ಟಿದ ಭ್ರಷ್ಟವ್ಯವಸ್ಥೆಯನ್ನು ಸರಿಪಡಿಸಬೇಕು. ನೇಪಾಳವನ್ನು ಕಟ್ಟಿ ಬೆಳೆಸಬೇಕಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಪರ್ಕ ಆಡಳಿತ ನಡೆಸಬೇಕಿದೆ ಎಂದು ಸುಶೀಲಾ ಕರ್ಕಿ ಹೇಳಿದ್ದಾರೆ. ನಾನು ಹಾಗೂ ನನ್ನ ತಂಡ 6 ತಿಂಗಳಿಗಿಂತ ಹೆಚ್ಚು ಇಲ್ಲಿರುವುದಿಲ್ಲ. ಮುಂದಿನ ಚುನಾಯಿತಿ ಸರ್ಕಾರಕ್ಕೆ ಅಧಿಕಾರ ಹಸ್ತಾಂತರ ಮಾಡುತ್ತೇವೆ. ನಿಮ್ಮೆಲ್ಲರ ಸಹಕಾರ ಅಗತ್ಯ. ಈ ಸಂಕಷ್ಟದ ಸಂದರ್ಭದಲ್ಲಿ ನಾವು ಒಗ್ಗಟ್ಟಿನಿಂದ ಇರಬೇಕು ಎಂದು ಸುಶೀಲಾ ಕರ್ಕಿ ಮನವಿ ಮಾಡಿದ್ದಾರೆ.

ಹೊತ್ತಿ ಉರಿದ ನೇಪಾಳದಲ್ಲಿ ಪ್ರಧಾನಿಯಾದ ಸುಶೀಲಾ ಕರ್ಕಿ ಯಾರು, ಭಾರತದ ಜೊತೆಗಿದೆ ಸಂಬಂಧ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!