
ಇಸ್ಲಾಮಾಬಾದ್: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಸದ್ದು ಜಗತ್ತಿನಾದ್ಯಂತ ಕೇಳಿ ಬಂದತ್ತು. ಪ್ರಪಂಚದಾದ್ಯಂತ ಜನರು ರಾಮಲಲ್ಲಾನ ದರ್ಶನಕ್ಕೆ ಆಗಮಿಸಿದ್ದು. ಪ್ರತಿನಿತ್ಯ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಪಾಕಿಸ್ತಾನದ ಹಿಂದೂಗಳು ಸಹ ಅಯೋಧ್ಯೆಗೆ ಬಾಲರಾಮನ ದರ್ಶನ ಪಡೆದುಕೊಂಡಿದ್ದಾರೆ. ಆದರೆ ಭಾರತ-ಪಾಕ್ ಸಂಬಂಧದಲ್ಲಿ ಉದ್ವಿಗ್ನತೆ ಇದ್ದ ಕಾರಣ ಎಲ್ಲರಿಗೂ ಬರುವುದು ಸುಲಭವಾಗಿರಲಿಲ್ಲ. ಪಾಕಿಸ್ತಾನದ ಒಂದು ಹಳ್ಳಿಯಲ್ಲಿ ವಿಶೇಷ ಘಟನೆಯೊಂದು ನಡೆಯುತ್ತಿದ್ದು, ಅದನ್ನು ಕೇಳಿ ನೀವು ಆಶ್ಚರ್ಯಚಕಿತರಾಗುತ್ತೀರಿ. ಪಾಕಿಸ್ತಾನದ ಜನರು ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.
ಪಾಕಿಸ್ತಾನದಲ್ಲಿ ಭವ್ಯ ಮಂದಿರ ನಿರ್ಮಾಣ
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಥಾರ್ಪಾರ್ಕರ್ ಜಿಲ್ಲೆಯ ಒಂದು ಹಳ್ಳಿಯಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ. ಇದು ಇತ್ತೀಚಿನ ದಿನಗಳಲ್ಲಿ ಸ್ಥಳೀಯರಲ್ಲಿ ಚರ್ಚೆಯ ವಿಷಯವಾಗಿದೆ. ವ್ಲಾಗರ್ ಮಾಖನ್ ರಾಮ್ ಈ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. ಮಂದಿರದ ನಿರ್ಮಾಣದಲ್ಲಿ ಅದೇ ಗ್ರಾಮದ ಅರ್ಚಕ ಥಾರುರಾಮ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಭಾರತಕ್ಕೆ ಬಂದಿದ್ದ ಅರ್ಚಕರು
ವ್ಲಾಗರ್ ಮಾಖನ್ ರಾಮ್ ಪ್ರಕಾರ, ಅವರು ಈ ಮಂದಿರಕ್ಕೆ ಹೋದಾಗ ಅಲ್ಲಿ ಸತ್ಸಂಗಕ್ಕಾಗಿ ವೇದಿಕೆ ಸಿದ್ಧಪಡಿಸಲಾಗುತ್ತಿತ್ತು. ವಿಶೇಷವೆಂದರೆ, ಆ ಸಮಯದಲ್ಲಿ ಮಂದಿರದಲ್ಲಿದ್ದ ಅರ್ಚಕರು ಇತ್ತೀಚೆಗೆ ಭಾರತದ ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮ ಮಂದಿರಕ್ಕೆ ಭೇಟಿ ನೀಡಿ ಹಿಂದಿರುಗಿದ್ದರು. ಅವರು ತಮ್ಮೊಂದಿಗೆ ಗಂಗಾ ಜಲವನ್ನು ಸಹ ತಂದಿದ್ದರು, ಅದನ್ನು ಈಗ ಪಾಕಿಸ್ತಾನದಲ್ಲಿ ನಿರ್ಮಿಸಲಾಗುತ್ತಿರುವ ಮಂದಿರದಲ್ಲಿ ಬಳಸಲಾಗುವುದು.
ಗಂಗಾ ಮಾತೆಯಿಂದ ಆಶೀರ್ವಾದ
ಅರ್ಚಕ ಥಾರುರಾಮ್ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಬಂದಾಗ, ಇಲ್ಲಿಗೆ ಬಂದು ಗಂಗಾ ಮಾತೆಯಿಂದ ತನಗೂ ರಾಮ ಮಂದಿರವನ್ನು ನೀಡುವಂತೆ ಆಶೀರ್ವಾದ ಬೇಡಿಕೊಂಡೆ ಎಂದು ಹೇಳಿದರು. ಅರ್ಚಕರ ಪ್ರಕಾರ, ಈ ಮಂದಿರವನ್ನು ನಿರ್ಮಿಸಲು ಪಾಕಿಸ್ತಾನದ ವಿವಿಧ ಭಾಗಗಳ ಜನರು ಸಹಾಯ ಮಾಡುತ್ತಿದ್ದಾರೆ. ಆರು ತಿಂಗಳ ಹಿಂದೆ ಮಂದಿರದ ನಿರ್ಮಾಣ ಪ್ರಾರಂಭವಾಯಿತು.
ಪರಿಸರದ ಒಳಗೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ
ಅರ್ಚಕ ಥಾರುರಾಮ್ ಅವರ ಉಲ್ಲೇಖದೊಂದಿಗೆ ವ್ಲಾಗರ್ ಅವರು ಮುಖ್ಯ ಮಂದಿರವು ಬಹುತೇಕ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾತ್ರ ಬಾಕಿ ಇದೆ. ಮಂದಿರದ ಬೌಂಡರಿ ಸಹ ಪೂರ್ಣಗೊಂಡಿದೆ. ಆವರಣದ ಒಳಗೆ ಇತರ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ.
ರಾಮ್ ದರ್ಬಾರ್
‘ಅಯೊಧ್ಯೆಯ ಭವ್ಯ ರಾಮಮಂದಿರದಲ್ಲಿನ ರಾಮ್ ದರ್ಬಾರ್ ಸಭಾಂಗಣ ಮುಂದಿನ ತಿಂಗಳು ಸಂಪೂರ್ಣವಾಗಿ ಸಿದ್ಧವಾಗಲಿದ್ದು, ಜೂ.6ರಿಂದ ಭಕ್ತರ ಪ್ರವೇಶಕ್ಕೆ ತೆರೆಯಲಿದೆ’ ಎಂದು ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವಸಂತ ಪಂಚಮಿಯಂದು 1 ಕೋಟಿಗೂ ಹೆಚ್ಚು ಭಕ್ತರ ಭೇಟಿ
‘ರಾಮನು ಆಸ್ಥಾನದಲ್ಲಿ ದರ್ಬಾರು ನಡೆಸುವ ಚಿತ್ರಣವು ದರ್ಬಾರ್ ಹಾಲ್ನಲ್ಲಿ ಇರಲಿದೆ. ಜೈಪುರದ ಅಮೃತಶಿಲೆಯಿಂದೆ ಕೆತ್ತಲಾದ 5 ಅಡಿ ಎತ್ತರದ ರಾಜನ ಸ್ವರೂಪದಲ್ಲಿರುವ ಶ್ರೀರಾಮ, ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ, ಹನುಮಂತರ ಮೂರ್ತಿಗಳನ್ನು ಮೇ.23ರಂದು ಮಂದಿರದ ಮೊದಲ ಮಹಡಿಯಲ್ಲಿ ಸ್ಥಾಪಿಸಲಾಗುವುದು. ಆಗ ಮತ್ತೆ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುವುದಿಲ್ಲ. ಬದಲಿಗೆ ಜೂ.5ರ ವರೆಗೆ ವಿವಿಧ ಪೂಜೆಗಳು ನಡೆಯಲಿವೆ. ಬಳಿಕ ಭಕ್ತರ ಪ್ರವೇಶಕ್ಕೆ ಅನುಮತಿಸಲಾಗುವುದು’ ಎಂದು ಮಿಶ್ರಾ ಮಾಹಿತಿ ನೀಡಿದರು
ಅಂತೆಯೇ, ಅಷ್ಟರೊಳಗೆ 2ನೇ ಮಹಡಿ ಸೇರಿದಂತೆ ಸಂಪೂರ್ಣ ರಾಮ ಮಂದಿರ ಹಾಗೂ ಅದರ ಸುತ್ತಲಿರುವ 4 ಮಂದಿರಗಳ ನಿರ್ಮಾಣ ಕಾರ್ಯ ಸಂಪನ್ನಗೊಳ್ಳಲಿದೆ ಎಂದರು. 2020ರಿಂದ ಮಂದಿರದ ನಿರ್ಮಾಣ ಕಾರ್ಯ ಆರಂಭವಾಗಿದ್ದು, 2024ರಲ್ಲಿ ಪ್ರಾಣಪ್ರತಿಷ್ಠೆ ಆಗಿತ್ತು. ದೇಶದಲ್ಲಿ ಈ ದಿನವನ್ನು ಹಬ್ಬವಂತೆ ಆಚರಿಸಲಾಗಿತ್ತು.
ಇದನ್ನೂ ಓದಿ: ಚುನಾವಣೆಗೆ ಸಜ್ಜಾದ ಬಿಜೆಪಿ; ಪಶ್ಚಿಮ ಬಂಗಾಳದಲ್ಲಿ ಅಯೋಧ್ಯೆ ಮಾದರಿ ರಾಮಮಂದಿರ ನಿರ್ಮಾಣಕ್ಕೆ ತಯಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ