ಹಿಂದು ದೇಗುಲಕ್ಕೆ ಪಾಕಿಸ್ತಾನದಲ್ಲಿ ಬೆಂಕಿ: 30 ದುರುಳರು ಅರೆಸ್ಟ್‌

Kannadaprabha News   | Asianet News
Published : Jan 01, 2021, 11:04 AM IST
ಹಿಂದು ದೇಗುಲಕ್ಕೆ ಪಾಕಿಸ್ತಾನದಲ್ಲಿ ಬೆಂಕಿ: 30 ದುರುಳರು ಅರೆಸ್ಟ್‌

ಸಾರಾಂಶ

ಪಾಕಿಸ್ತಾನದಲ್ಲಿನ  ನಡೆದ ಹಿಂದೂ ದೇವಾಸ್ಥಾನ ದ್ವಂಸದಲ್ಲಿ ಪಾಲ್ಗೊಂಡ 30 ಮಂದಿ ದುರುಳರನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪೇಷಾವರ(ಜ.01): ದೇವಸ್ಥಾನವೊಂದರ ನವೀಕರಣ ಹಾಗೂ ವಿಸ್ತರಣೆ ವಿರೋಧಿಸಿ ಪಾಕಿಸ್ತಾನದ ಇಸ್ಲಾಮಿಕ್‌ ಮೂಲಭೂತವಾದಿ ಪಕ್ಷವೊಂದರ ಸದಸ್ಯರು ದೇಗುಲವನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಿರುವ ಘಟನೆ ನಡೆದಿದೆ. 

ಈ ಪ್ರಕರಣ ಸಂಬಂಧ ಜಮಿಯಾತ್‌ ಉಲೇಮಾ ಎ ಇಸ್ಲಾಮ್‌ ಪಕ್ಷದ ಕೇಂದ್ರೀಯ ನಾಯಕ ರೆಹಮತ್‌ ಸಲಾಂ ಖಟ್ಟಕ್‌ ಸೇರಿದಂತೆ 30 ಮಂದಿಯನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ. 

ಖೈಬರ್‌ ಪಖ್ತೂಂಖ್ವಾ ಪ್ರಾಂತ್ಯದ ಕಾರಕ್‌ ಜಿಲ್ಲೆಯ ಟೆರ್ರಿ ಎಂಬ ಗ್ರಾಮದಲ್ಲಿ ದೇಗುಲವೊಂದರ ವಿಸ್ತರಣೆ ಹಾಗೂ ನವೀಕರಣ ಕಾರ್ಯ ನಡೆಯುತ್ತಿತ್ತು. ಹೊಸದಾಗಿ ಕಟ್ಟಲಾದ ಭಾಗವನ್ನು ಉರುಳಿಸಿದ್ದ ಈ ಕಿಡಿಗೇಡಿಗಳು, ದೇಗುಲಕ್ಕೆ ಬೆಂಕಿ ಹಚ್ಚಿದ್ದರು. ಇದು ಹಿಂದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.

ಗಡಿ ಮಸೀದಿಗಳನ್ನು ಗುರಿಯಾಗಿಸಿಕೊಂಡು ಪಾಕ್‌ ಗುಂಡಿನ ದಾಳಿ

ಶ್ರೀನಗರ: ಹೊಸ ವರ್ಷದ ಮುನ್ನಾ ದಿನ ಪಾಕಿಸ್ತಾನ ಪಡೆಗಳು ಜಮ್ಮು- ಕಾಶ್ಮೀರದ ಕುಪ್ವಾರ ಮತ್ತು ರಜೌರಿ ಜಿಲ್ಲೆಯ ಗಡಿ ಗ್ರಾಮಗಳ ಮಸೀದಿಗಳು ಹಾಗೂ ಮನೆಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ. 

ಪಾಕ್ ಪರ ಘೋಷಣೆ ಹಿಂದಿನ ಕಾರಣ ಹೇಳಿದ ಮುತಾಲಿಕ್

ಗುರುವಾರ ಮಧ್ಯಾಹ್ನ 3.15 ಗಂಟೆಗೆ ಪಾಕ್‌ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಮಾರ್ಟರ್‌ ಹಾಗೂ ಶೆಲ್‌ಗಳಿಂದ ದಾಳಿ ನಡೆಸಿವೆ. 2020ರಲ್ಲಿ ಪಾಕ್‌ ಪಡೆಗಳು ಜಮ್ಮು- ಕಾಶ್ಮೀರದಲ್ಲಿ ಒಟ್ಟು 5,100 ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಇದು ಕಳೆದ 18 ವರ್ಷಗಳಲ್ಲೇ ಅಧಿಕವಾಗಿದೆ. ಪಾಕಿಸ್ತಾನದ ದಾಳಿಗೆ ಈ ವರ್ಷ 24 ಭದ್ರತಾ ಸಿಬ್ಬಂದಿ ಸೇರಿದಂತೆ 36 ಮಂದಿ ಮೃತಪಟ್ಟಿದ್ದು, 130 ಮಂದಿ ಗಾಯಗೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!
ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ