ಬ್ರಿಟನ್‌ ಸಂಸತ್ತಲ್ಲಿ ಪ್ರಧಾನಿ ಮೋದಿ ಸಮರ್ಥಿಸಿದ ಪ್ರಧಾನಿ ರಿಷಿ ಸುನಕ್‌

Published : Jan 20, 2023, 07:15 AM IST
ಬ್ರಿಟನ್‌ ಸಂಸತ್ತಲ್ಲಿ ಪ್ರಧಾನಿ ಮೋದಿ ಸಮರ್ಥಿಸಿದ ಪ್ರಧಾನಿ ರಿಷಿ ಸುನಕ್‌

ಸಾರಾಂಶ

ಗೋಧ್ರೋತ್ತರ ಗಲ​ಭೆ​ಗಳಲ್ಲಿ ನರೇಂದ್ರ ಮೋದಿ ಪಾತ್ರ​ವಿದೆ ಎಂಬ ಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರದ ಅಂಶಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಈ ವಿಷಯವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಲು ಯತ್ನಿಸಿದ ಪಾಕಿಸ್ತಾನದ ಮೂಲದ ಸಂಸದ ಇಮ್ರಾನ್‌ ಹುಸೇನ್‌ ಅವರಿಗೂ ತಪರಾಕಿ ಹಾಕಿದ್ದಾರೆ.

ಲಂಡ​ನ್‌: ಗೋಧ್ರೋತ್ತರ ಗಲ​ಭೆ​ಗಳಲ್ಲಿ ನರೇಂದ್ರ ಮೋದಿ ಪಾತ್ರ​ವಿದೆ ಎಂಬ ಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರದ ಅಂಶಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಈ ವಿಷಯವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಲು ಯತ್ನಿಸಿದ ಪಾಕಿಸ್ತಾನದ ಮೂಲದ ಸಂಸದ ಇಮ್ರಾನ್‌ ಹುಸೇನ್‌ ಅವರಿಗೂ ತಪರಾಕಿ ಹಾಕಿದ್ದಾರೆ.

ಗೋಧ್ರೋತ್ತರ (Godhra riots) ಗಲಭೆಗಳ ಕುರಿತು ಬಿಬಿಸಿ ಚಾನೆಲ್‌ 2 ಎಪಿಸೋಡ್‌ಗಳ ಸಾಕ್ಷ್ಯಚಿತ್ರ ಸಿದ್ಧಪಡಿಸಿದ್ದು, ಮೊದಲ ಭಾಗವನ್ನು ಇತ್ತೀಚೆಗೆ ಪ್ರಸಾರ ಮಾಡಿದೆ. ಈ ಬಗ್ಗೆ ಗುರುವಾರ ಬ್ರಿಟನ್‌ ಸಂಸತ್‌ನಲ್ಲಿ ಪ್ರಸ್ತಾಪಿಸಿದ ಸಂಸದ ಇಮ್ರಾನ್‌ ಹುಸೇನ್‌, ‘ನೂರಾರು ಜನ​ರನ್ನು ಬಲಿ ತೆಗೆ​ದು​ಕೊಂಡ ಗೋದ್ರಾ ಗಲ​ಭೆ​ಯಲ್ಲಿ ಅಂದಿನ ಮುಖ್ಯ​ಮಂತ್ರಿ​ಯಾ​ಗಿದ್ದ ಮೋದಿ ಅವರ ಕೈವಾ​ಡ​ವಿದೆ. ಈ ಕುರಿ​ತಾಗಿ ಬಿಬಿಸಿ (BBC documentary) ತಯಾ​ರಿ​ಸಿ​ರುವ ಸಾಕ್ಷ್ಯ​ಚಿ​ತ್ರ​ವನ್ನು ಸುನಕ್‌ ಒಪ್ಪಿ​ಕೊ​ಳ್ಳು​ತ್ತಾರಾ?’ ಪ್ರಶ್ನಿ​ಸಿ​ದರು. ಇದಕ್ಕೆ ಪ್ರತಿ​ಕ್ರಿ​ಯಿ​ಸಿದ ಸುನಕ್‌, ‘ನಾವು ಹಿಂಸಾ​ಚಾ​ರ​ವನ್ನು ವಿರೋ​ಧಿ​ಸು​ತ್ತೇವೆ. ಆದರೆ ಸಜ್ಜ​ನ​ರಾದ ಮೋದಿ (Narendra Modi) ವಿರುದ್ಧ ಬಿಬಿಸಿ ನಿರ್ಮಾಣ ಮಾಡಿ​ರುವ ಪಾತ್ರ​ವನ್ನು ನಾನು ಒಪ್ಪು​ವು​ದಿಲ್ಲ. ಈ ಕುರಿ​ತಾಗಿ ಬ್ರಿಟನ್‌ ಸರ್ಕಾ​ರದ ನಿಲುವು ಸ್ಪಷ್ಟ​ವಾ​ಗಿದೆ ಮತ್ತು ಅದು ಎಂದಿಗೂ ಬದ​ಲಾ​ಗು​ವು​ದಿಲ್ಲ ಎಂದು ಹೇಳಿ​ದ್ದಾರೆ.

ಲಂಡನ್‌ನಲ್ಲಿ ಕುಚಿಪುಡಿ ನೃತ್ಯಕ್ಕೆ ಹೆಜ್ಜೆ ಹಾಕಿದ ರಿಷಿ ಸುನಕ್ ಪುತ್ರಿ

ಸಾಕ್ಷ್ಯಚಿತ್ರಕ್ಕೆ ಭಾರತ ಆಕ್ಷೇ​ಪ

2002ರ ಗುಜ​ರಾತ್‌ ಗಲ​ಭೆಯ ಕುರಿ​ತಾಗಿ ಬಿಬಿಸಿ ನಿರ್ಮಾಣ ಮಾಡಿ​ರುವ ಸಾಕ್ಷ್ಯ​ಚಿ​ತ್ರ​ಗಳು ಕಳಂಕಿತ ನಿರೂ​ಪ​ಣೆ​ಯ​ನ್ನು ಮಾಡಲು ಮಾಡ​ಲಾದ ಪ್ರಚಾ​ರದ ಸರಕು ಎಂದು ಭಾರತ ಕಿಡಿ​ಕಾ​ರಿದೆ. ಇದರಲ್ಲಿ ಪಕ್ಷ​ಪಾತ, ವಸ್ತು​ನಿ​ಷ್ಠ​ತೆಯ ಕೊರತೆ ಮತ್ತು ವಸಾ​ಹಾ​ತು​ಶಾಹಿ ಮನ​ಸ್ಥಿ​ತಿಯ ಮುಂದು​ವ​ರಿಕೆ ಸ್ಪಷ್ಟ​ವಾಗಿ ಗೋಚ​ರಿ​ಸು​ತ್ತಿದೆ. ಇದು ಇದ​ನ್ನು ನಿರ್ಮಾಣ ಮಾಡಿ​ರುವ ಸಂಸ್ಥೆ ಮತ್ತು ವ್ಯಕ್ತಿ​ಗಳ ಪ್ರಚಾ​ರ​ವಾ​ಗಿದೆ. ಇದರ ಹಿಂದಿನ ಉದ್ದೇಶ ಮತ್ತು ಕಾರ್ಯ​ಸೂಚಿ ನಮಗೆ ಆಶ್ಚರ್ಯ ಉಂಟು​ಮಾ​ಡಿ​ದೆ ಎಂದು ವಿದೇ​ಶಾಂಗ ಸಚಿ​ವಾ​ಲ​ಯದ ವಕ್ತಾರ ಅರಿಂದಮ್‌ ಬಗ್ಚಿ ಹೇಳಿ​ದ್ದಾರೆ.

ಶ್ವಾನದೊಂದಿಗೆ 10 ಡೌನಿಂಗ್‌ ಸ್ಟ್ರೀಟ್‌ಗೆ ಕಾಲಿಟ್ಟ Rishi Sunak: ಟ್ವಿಟ್ಟರ್‌ನಲ್ಲಿ ವೈರಲ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್