
ಇಸ್ಲಾಮಾಬಾದ್: ಅಮೆರಿಕವೇನಾದರೂ ನಮ್ಮ ಮೇಲೆ ದಾಳಿ ಮಾಡಿದರೆ, ನಾವು ಅವರ ನೆಲೆಗಳನ್ನು ತಲುಪಲು ಸಾಧ್ಯವಿಲ್ಲ. ಹಾಗಾಗಿ ಅಮೆರಿಕದ ಮಿತ್ರ ದೇಶವಾದ ಭಾರತದ ಮೇಲೆ ಬಾಂಬ್ ಹಾಕಲು ಹಿಂದೆ ಮುಂದೆ ನೋಡಬಾರದು ಎಂದು ಭಾರತಕ್ಕೆ ಪಾಕಿಸ್ತಾನದ ಮಾಜಿ ಹೈಕಮಿಷನರ್ ಅಬ್ದುಲ್ ಬಸಿತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಟೀವಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಅಮೆರಿಕ ದೀರ್ಘಶ್ರೇಣಿ ಬ್ಯಾಲೆಸ್ಟಿಕ್ ಕ್ಷಿಪಣಿ ಸಿದ್ಧಪಡಿಸುತ್ತಿದೆ’ ಎಂಬ ಅಮೆರಿಕ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
‘ನಮ್ಮ ಬಳಿ ಅಂಥ ಕ್ಷಿಪಣಿ ಇಲ್ಲ. ಭಾರತದ ಬಳಿ ಅಗ್ನಿ ಕ್ಷಿಪಣಿ ಇದೆ. ಆದರೆ ಭಾರತೀಯ ಮೂಲದ ತುಳಸಿ ಭಾರತ ಬಿಟ್ಟು ಬೇಕೆಂದೇ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಕನಿಷ್ಠ ಪಕ್ಷ ನಮ್ಮ ಬಳಿ ಇಸ್ರೇಲ್ ತಲುಪಬಲ್ಲ ಕ್ಷಿಪಣಿಯಾದರೂ ಇರಲಿ ಎಂದು ಆಶಿಸುವೆ’ ಎಂದರು.ಇದೇ ವೇಳೆ, ‘ಅಮೆರಿಕವು ಭಾರತದ ಯುದ್ಧ ತಂತ್ರದ ಪಾಲುದಾರ. ಹೀಗಾಗಿ ಅಮೆರಿಕ ಪಾಕ್ ಮೇಲೆ ದಾಳಿ ಮಾಡುವಂತಹ ಸಂದರ್ಭ ಬಂದರೆ, ನಾವು ಅವರ ನೆಲೆಗಳನ್ನು ತಲುಪಲು ಸಾಧ್ಯವಾಗುವುದಿಲ್ಲ. ಆಗ ನಮ್ಮ ಆಯ್ಕೆ ಯಾವುದು? ಭಾರತ. ಏಕೆಂದರೆ ಭಾರತವು ಅಮೆರಿಕದ ಮಿತ್ರ. ಯಾರಾದರೂ ನಮ್ಮ ಮೇಲೆ ಕೆಟ್ಟ ದೃಷ್ಟಿ ಬೀರಿದರೆ, ಯಾವುದೇ ಹಿಂಜರಿಕೆ ಇಲ್ಲದೆ ಮುಂಬೈ ಮತ್ತು ನವದೆಹಲಿ ಮೇಲೆ ದಾಳಿ ಮಾಡಬೇಕು’ ಎಂದರು.
ಇರಾನ್ ತನ್ನ ಮೇಲೆ ದಾಳಿ ಮಾಡಿದರೂ ಅಮೆರಿಕ ಮೇಲೆ ದಾಳಿ ಮಾಡಿಲ್ಲ. ಬದಲಾಗಿ ಅಮೆರಿಕದ ಮಿತ್ರ ದೇಶಗಳಾದ ಗಲ್ಫ್ ದೇಶಗಳ ಮೇಲೆ ದಾಳಿ ಮಾಡುತ್ತಿದೆ. ಹೀಗಾಗಿ ಪಾಕ್ ಮೇಲೆ ಅಮೆರಿಕ ದಾಳಿ ಮಾಡಿದರೆ ಅಮೆರಿಕದ ಮಿತ್ರ ದೇಶ ಭಾರತದ ಮೇಲೆ ದಾಳಿ ಮಾಡಬೇಕು ಎಂಬುದು ಬಸಿತ್ ಹೇಳಿಕೆ ಸಾರಾಂಶ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ