
ಇಸ್ಲಾಮಾಬಾದ್ (ಡಿ. 20): ದೇಶದ್ರೋಹ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಪರ್ವೇಜ್ ಮುಷರ್ರಫ್, ಒಂದು ವೇಳೆ ಶಿಕ್ಷೆ ಜಾರಿಗೂ ಮುನ್ನವೇ ಸಾವನ್ನಪ್ಪಿದರೆ, ಅವರ ಶವವನ್ನು ಇಸ್ಲಾಮಾಬಾದ್ನಲ್ಲಿರುವ ಸೆಂಟ್ರಲ್ ಸ್ಕ್ವೇರ್ನಲ್ಲಿ ಮೂರು ದಿನ ನೇತುಹಾಕಬೇಕು ಎಂದು ಕೋರ್ಟ್ ಹೇಳಿದೆ.
ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ಗೆ ಗಲ್ಲು ಶಿಕ್ಷೆ!
ಮಾಜಿ ಅಧ್ಯಕ್ಷ ಮುಷರ್ರಫ್ಗೆ ಗಲ್ಲು ಶಿಕ್ಷೆ ಆದೇಶ ನೀಡಿದ್ದ ಪೇಶಾವರ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ವಕಾರ್ ಅಹಮದ್ ಸೇಠ್ ಬರೆದಿದ್ದ 167 ಪುಟಗಳ ತೀರ್ಪಿನಲ್ಲಿ ಈ ಅಂಶವಿದೆ. ಮೃತ ದೇಹವನ್ನು ಇಸ್ಲಾಮಾಬಾದ್ನ ಡಿ- ಚೌಕ್ವರೆಗೂ ತಂದು, ಬಳಿಕ 3 ದಿನ ನೇತುಹಾಕಬೇಕು ಎಂದು ನ್ಯಾಯಮೂರ್ತಿ ಆದೇಶಿಸಿದ್ದಾರೆ.
ಜೈಲು ಪಾಲಾಗುವ ಭೀತಿಯಿಂದಲೇ ಮುಷರ್ರಫ್ 3 ವರ್ಷಗಳ ಹಿಂದೆಯೇ ದೇಶ ತೊರೆದು, ಹಾಲಿ ದುಬೈನಲ್ಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಮುಷರ್ರಫ್ ಸದ್ಯ ಆಸ್ಪತ್ರೆಯಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ