ಕೊರೋನಾದಿಂದ ತತ್ತರಿಸಿರುವ ಜನತೆಗೆ ವೈದ್ಯನ ಗುಡ್‌ನ್ಯೂಸ್!

Suvarna News   | Asianet News
Published : Jun 01, 2020, 05:53 PM ISTUpdated : Jun 01, 2020, 06:02 PM IST
ಕೊರೋನಾದಿಂದ ತತ್ತರಿಸಿರುವ ಜನತೆಗೆ ವೈದ್ಯನ ಗುಡ್‌ನ್ಯೂಸ್!

ಸಾರಾಂಶ

ಕೊರೋನಾ ವೈರಸ್ ಮಹಾಮಾರಿಯಿಂದ ಜನರು ತತ್ತರಿಸಿದ್ದಾರೆ. ಭಾರತದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಡಬಲ್ ಆಗುತ್ತಿದೆ. ಸಮುದಾಯ ಮಟ್ಟದಲ್ಲಿ ಹರಡುತ್ತಿರುವ ಭೀತಿ ಎದುರಾಗಿದೆ. ಆತಂಕದಲ್ಲಿ ದಿನದೂಡುತ್ತಿರುವಾಗಲೇ ವೈದ್ಯರು ನೀಡಿದ ಹೇಳಿಕೆ ಜನರಲ್ಲಿ ನೆಮ್ಮದಿ ತರಿಸಿದೆ.

ಇಟಲಿ(ಜೂ.01): ಕೊರೋನಾ ವೈರಸ್ ಭಾರತ ಸೇರಿದಂತೆ ಬಹುತೇಕ ಎಲ್ಲಾ ದೇಶಗಳನ್ನು ಬೆಚ್ಚಿಬೀಳಿಸಿದೆ. ಅದರಲ್ಲೂ ಇಟಲಿ ಭೀಕರತೆಗೆ ಸಾಕ್ಷಿಯಾಗಿತ್ತು. ಇದೀಗ ಕೊಂಚ ಸುಧಾರಿಸುತ್ತಿದೆ. ಕೊರೋನಾಗೆ ಮೃತರಾದ ಗರಿಷ್ಠ ಸಂಖ್ಯೆಯಲ್ಲಿ ಇಟಲಿ 3ನೇ ಸ್ಥಾನದಲ್ಲಿದೆ. ಕೊರೋನಾ ವೈರಸ್‌ನಿಂದ ಇಟಲಿಯಲ್ಲಿ 33,415 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಇಟಲಿಯ ಸ್ಯಾನ್ ರಫೈಲೇ ಆಸ್ಪತ್ರೆ ವೈದ್ಯ ಆಲ್ಬರ್ಟ್ ಝಂಗ್ರಿಲೋ ಅಧ್ಯಯನ ವರದಿ ಜನರಲ್ಲಿ ನೆಮ್ಮದಿ ತಂದಿದೆ.

ರಾಜ್ಯದಲ್ಲಿ ಭಾನುವಾರ 299, ಸೋಮವಾರ ಎಷ್ಟಾಗಲಿದೆ ಕೊರೋನಾ ಕೇಸ್..?.

ಹೊಸ ಕೊರೋನಾ ವೈರಸ್‌ ಶಕ್ತಿ ಕ್ಷೀಣಿಸಿದೆ. ಆರಂಭದಲ್ಲಿ ವೈರಸ್ ಹೆಚ್ಚು ಶಕ್ತಿಶಾಲಿಯಾಗಿತ್ತು. ಇಷ್ಟೇ ಅಲ್ಲ ಮಾರಕವಾಗಿತ್ತು. ಆದರೆ ಈಗ ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಕೊರೋನಾ ವೈರಸ್ ಸಾಮರ್ಥ್ಯ ಕುಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೊರೋನಾ ಆರ್ಭಟ ಕಡಿಮೆಯಾಗಲಿದೆ ಎಂದು ಆಲ್ಬರ್ಟ್ ಝಂಗ್ರಿಲೋ  ಹೇಳಿದ್ದಾರೆ.

120 ಲಸಿಕೆಗಳು ಅಭಿವೃದ್ಧಿ ಹಂತದಲ್ಲಿ: ಕೊರೋನಾ ಲಸಿಕೆ ಎಲ್ಲಿಗೆ ಬಂತು?.

ವೈರಸ್ ಕುರಿತು ಅಧ್ಯಯನ ಮಾಡಿದ ಆಲ್ಬರ್ಟ್ ಝಂಗ್ರಿಲೋ ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಎರಡು ತಿಂಗಳ ಮೊದಲಿನ ವೈರಸ್ ಸಾಮರ್ಥ್ಯ ಹಾಗೂ ಅದು ಸೃಷ್ಟಿಸುತ್ತಿದ್ದ ಭೀಕರತೆ ಹೆಚ್ಚಿತ್ತು. ಆದರೆ ಈಗ ಕಾಣಿಸಿಕೊಳ್ಳುತ್ತಿರುವ ಕೊರೋನಾ ವೈರಸ್ ಶಕ್ತಿ ಕಳೆಗುಂದಿದೆ. ಹೀಗಾಗಿ ಕೊರೋನಾ ವೈರಸ್ ಇತರ ರೋಗದಂತೆ ಸೈಲೆಂಟ್ ಆಗಲಿದೆ ಎಂದು ಆಲ್ಬರ್ಟ್ ಝಂಗ್ರಿಲೋ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?