KP Sharma Oli: 'ರಾಮ ಹುಟ್ಟಿದ್ದು ನೇಪಾಳದಲ್ಲಲ್ಲ..' ಅನ್ನೋ ಮಾತು ಹೇಳಿದ್ದರೆ ನನ್ನ ಜೀವನ ಬೇರೆ ರೀತಿಯೇ ಇರ್ತಿತ್ತು!

Published : Sep 11, 2025, 09:49 PM IST
Nepal PM kp sharma oli resigns

ಸಾರಾಂಶ

Nepal Ex PM kp sharma oli resigns ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ತಮ್ಮ ರಾಜೀನಾಮೆಯ ನಂತರ ಹೃದಯ ವಿದ್ರಾವಕ ಪತ್ರ ಬರೆದಿದ್ದಾರೆ. ತಮ್ಮ ಹೇಳಿಕೆಗಳೇ ತಮ್ಮ ಪತನಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.

ಖಠ್ಮಂಡು (ಸೆ.11): ಮಂಗಳವಾರದವರೆಗೆ ನೇಪಾಳದ ಪ್ರಧಾನಿಯಾಗಿದ್ದ ಕೆ.ಪಿ. ಶರ್ಮಾ ಓಲಿ, ಹಿಂಸಾತ್ಮಕವಾಗಿ ತಿರುಗಿದ ಬೃಹತ್ ಪ್ರತಿಭಟನೆಗಳ ನಂತರ ರಾಜೀನಾಮೆ ನೀಡಿದರು, ಅವರ ಪದಚ್ಯುತಿಯ ನಂತರ ಅವರು ಮೊದಲ ಬಾರಿಗೆ ತಮ್ಮ ಮನದಾಳದ ಮಾತುಗಳನ್ನು ಬರೆದುಕೊಂಡಿದ್ದಾರೆ. ನೇಪಾಳದ ಪತ್ರಿಕಾ ಮುಖ್ಯಸ್ಥ ಚೌತರಿ ಅವರು ಬಿಡುಗಡೆ ಮಾಡಿದ ಪತ್ರದಲ್ಲಿ, ಓಲಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಕೆಲವು ಹೇಳಿಕೆಗಳನ್ನು ನೀಡದಿದ್ದರೆ, ಈ ರೀತಿ ಶಿಕ್ಷೆ ಅನುಭವಿಸುತ್ತಿರಲಿಲ್ಲ ಮತ್ತು ಅವರ ಜೀವನವು ಬೇರೆಯೇ ತಿರುವು ಪಡೆಯುತ್ತಿತ್ತು ಎಂದು ಹೇಳಿದ್ದಾರೆ.

ನನ್ನ ಮಾತುಗಳಿಗೆ ಬದ್ಧವಾಗಿದ್ದಕ್ಕೆ ಈ ಶಿಕ್ಷೆ ಎಂದ ಒಲಿ

"ನಮ್ಮ ದೇಶದಲ್ಲಿ ವ್ಯವಹಾರ ನಡೆಸುವ ಸಾಮಾಜಿಕ ಮಾಧ್ಯಮಗಳು ಇಲ್ಲಿನ ನಿಯಮಗಳನ್ನು ಪಾಲಿಸಬೇಕು ಮತ್ತು ಅವುಗಳನ್ನು ಇಲ್ಲಿ ಲಿಸ್ಟೆಡ್‌ ಕಂಪನಿ ಮಾಡಬೇಕು ಎಂದು ನಾನು ಒತ್ತಾಯಿಸಿದ್ದೆ. ಲಿಪುಲೇಖ್, ಕಲಾಪಾನಿ ಮತ್ತು ಲಿಂಪಿಯಾಧುರ ನಮ್ಮದು ಎಂದು ನಾನು ವಾದಿಸಿದ್ದೇನೆ. ಭಗವಾನ್ ಶ್ರೀರಾಮನು ನೇಪಾಳದಲ್ಲಿ ಜನಿಸಿದ್ದ ಮತ್ತು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಭಾರತದಲ್ಲಿ ಅಲ್ಲ ಎಂದು ನಾನು ಹೇಳಿದ್ದೆ. ನಾನು ಈ ಮಾತುಗಳಿಂದ ಹಿಂದೆ ಸರಿದಿದ್ದರೆ ನನ್ನ ಜೀವನ ಬೇರೆಯೇ ರೀತಿ ಇರುತ್ತಿತ್ತು" ಎಂದು ನೇಪಾಳಿ ಸುದ್ದಿ ವೆಬ್‌ಸೈಟ್ ಸೇಟೋಪತಿ ಪ್ರಕಟಿಸಿದ ಪತ್ರದ ಸ್ಥೂಲವಾಗಿ ಅನುವಾದಿಸಲಾದ ಆಯ್ದ ಭಾಗದಲ್ಲಿ ಅವರು ಹೇಳಿದ್ದಾರೆ.

"ನನಗೆ ಇನ್ನೂ ಅನೇಕ ಅವಕಾಶಗಳು ಸಿಗುತ್ತಿದ್ದವು. ನಾನು ಅನೇಕ ವಿಷಯಗಳನ್ನು ಸಾಧಿಸುತ್ತಿದ್ದೆ. ಲಿಂಪಿಯಾಧುರ ಸೇರಿದಂತೆ ನೇಪಾಳದ ನಕ್ಷೆಯನ್ನು ವಿಶ್ವಸಂಸ್ಥೆಗೆ ಕಳುಹಿಸದಿದ್ದರೆ ಅಥವಾ ಇತರರು ನಾನು ಬಯಸಿದಂತೆ ಮಾಡಲು ಅವಕಾಶ ನೀಡಿದ್ದರೆ, ನನ್ನ ಜೀವನವು ಬೇರೆಯೇ ತಿರುವು ಪಡೆಯುತ್ತಿತ್ತು" ಎಂದು ಪತ್ರದಲ್ಲಿ ಬರೆದಿದ್ದಾರೆ.

ಮಂಗಳವಾರ, ನೇಪಾಳದಲ್ಲಿ ಪ್ರತಿಭಟನೆಗಳು ದೊಡ್ಡ ಪ್ರಮಾಣದಲ್ಲಿ ಕಾವು ಪಡೆಯುತ್ತಿದ್ದಂತೆ, ಸೇನಾ ಹೆಲಿಕಾಪ್ಟರ್ ಕೆ.ಪಿ. ಶರ್ಮಾ ಓಲಿಯನ್ನು ಅಜ್ಞಾತ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಯಿತು. ಈ ನಡುವೆ, ಪ್ರತಿಭಟನಾಕಾರರು ಅವರ ನಿವಾಸಕ್ಕೆ ಬೆಂಕಿ ಹಚ್ಚಿದರು ಮತ್ತು ಮಾಜಿ ಪ್ರಧಾನಿ ಒಬ್ಬರ ಪತ್ನಿ ದುರಂತವಾಗಿ ಈ ಘಟನೆಯಲ್ಲಿ ಜೀವಂತವಾಗಿ ಸುಟ್ಟುಹೋದರು. ಓಲಿ ಸರ್ಕಾರದ ಇತರ ಹಲವಾರು ಮಂತ್ರಿಗಳು ಕೂಡ ಕೆಲವೇ ಸಮಯದಲ್ಲಿ ರಾಜೀನಾಮೆ ನೀಡಿದರು.

ಪ್ರತಿಭಟನಾಕಾರರು ಸಂಸತ್ತು ಕಟ್ಟಡ ಮತ್ತು ಅದರ ಹೊರಗೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರು. ಕಠ್ಮಂಡುವಿನ ಅತಿ ಎತ್ತರದ ಹೋಟೆಲ್ ಹಿಲ್ಟನ್ ಹೋಟೆಲ್‌ನಿಂದಲೂ ದೃಶ್ಯಗಳು ಕಾಣಿಸಿಕೊಂಡವು. ಹಿಂಸಾತ್ಮಕ ಪ್ರತಿಭಟನೆಗಳ ನಂತರ ಹೋಟೆಲ್ ಕಟ್ಟಡ ಹೇಗೆ ಸುಟ್ಟು ಕರಕಲಾಗಿದೆ ಎಂಬುದನ್ನು ತೋರಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

17 ವರ್ಷಗಳ ಬಳಿಕ ತಾರಿಕ್ ರೆಹಮಾನ್ ಬಾಂಗ್ಲಾಕ್ಕೆ ಎಂಟ್ರಿ; ಭುಗಿಲೆದ್ದ ರಾಜಕೀಯ ಸಂಘರ್ಷ, ಯೂನಸ್ ಸರ್ಕಾರಕ್ಕೆ ಭಾರೀ ಹಿನ್ನಡೆ
ನೋವಿನ ಕೂಗು ಕೇಳಲಿಲ್ಲ, ಕೆನಡಾ ಆಸ್ಪತ್ರೆ ನಿರ್ಲಕ್ಷ್ಯಕ್ಕೆ 8 ಗಂಟೆ ನರಳಾಡಿ ಹೃದಯಾಘಾತದಿಂದ ಭಾರತೀಯನ ಸಾವು!