ಇದು ಭಿಕಾರಿ ಸರ್ಕಾರ : ಪಾಕ್‌ ವಿರುದ್ಧ ಲಷ್ಕರ್‌ ಉಗ್ರಾಕ್ರೋಶ

Kannadaprabha News   | Kannada Prabha
Published : Jan 11, 2026, 05:26 AM IST
 Lashkar-e-Taiba

ಸಾರಾಂಶ

ನೆರೆಮನೆಯವರ ಕಚ್ಚಲು ಇಟ್ಟುಕೊಂಡ ಹಾವು ಸಾಕಿದವರಿಗೇ ಬುಸುಗುಟ್ಟುವಂತೆ, ಪಾಕ್‌ ಸರ್ಕಾರದ ಕೃಪಾಪೋಷಿತ ಉಗ್ರಸಂಘಟನೆ ಲಷ್ಕರ್‌-ಎ-ತೊಯ್ಬಾ ಇದೀಗ ತನ್ನ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದೆ. ಸಂಘಟನೆಯ ಹಿರಿಯ ಕಮಾಂಡರ್‌ ಮೊಹಮ್ಮದ್ ಅಶ್ಫಾಕ್ ರಾಣಾ ವೇದಿಕೆಯೊಂದರಲ್ಲಿ ಬಹಿರಂಗವಾಗಿ ಟೀಕಿಸಿದ್ದಾನೆ.

ಇಸ್ಲಾಮಾಬಾದ್‌: ನೆರೆಮನೆಯವರ ಕಚ್ಚಲು ಇಟ್ಟುಕೊಂಡ ಹಾವು ಸಾಕಿದವರಿಗೇ ಬುಸುಗುಟ್ಟುವಂತೆ, ಪಾಕ್‌ ಸರ್ಕಾರದ ಕೃಪಾಪೋಷಿತ ಉಗ್ರಸಂಘಟನೆ ಲಷ್ಕರ್‌-ಎ-ತೊಯ್ಬಾ ಇದೀಗ ತನ್ನ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದೆ.

ಬಹಿರಂಗವಾಗಿ ಪಾಕ್‌ನಲ್ಲಿನ ದುರಾಡಳಿತ ಟೀಕಿಸಿದ

ಸಂಘಟನೆಯ ಹಿರಿಯ ಕಮಾಂಡರ್‌ ಮೊಹಮ್ಮದ್ ಅಶ್ಫಾಕ್ ರಾಣಾ ವೇದಿಕೆಯೊಂದರಲ್ಲಿ ಬಹಿರಂಗವಾಗಿ ಪಾಕ್‌ನಲ್ಲಿನ ದುರಾಡಳಿತ ಟೀಕಿಸಿದ್ದಾನೆ.

ಪಂಜಾಬ್‌ ಪ್ರಾಂತ್ಯವನ್ನು ಬಲೂಚಿಸ್ತಾನದಲ್ಲಿರುವಂತಹ ದುಃಸ್ಥಿತಿಗೆ

ವಿಡಿಯೋದಲ್ಲಿ ರಾಣಾ, ‘ಪಾಕ್‌ನ ಪಂಜಾಬ್‌ ಪ್ರಾಂತ್ಯವನ್ನು ಬಲೂಚಿಸ್ತಾನದಲ್ಲಿರುವಂತಹ ದುಃಸ್ಥಿತಿಗೆ ದೂಡಲಾಗಿದೆ. ಅಧಿಕಾರದಲ್ಲಿರುವವರು ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಅದಕ್ಷತೆ ಮತ್ತು ನೈತಿಕ ಕುಸಿತ ತಾಂಡವವಾಡುತ್ತಿದೆ. ನಮ್ಮ ಸರ್ಕಾರ ಸಾಲ ತೆಗೆದುಕೊಳ್ಳದೆ ಇರುವ ದೇಶವೇ ಇಲ್ಲ. ಪಾಕ್‌ನಲ್ಲಿ ಹುಟ್ಟುವ ಪ್ರತಿ ಮಗುವಿನ ತಲೆಯ ಮೇಲೆ ಲಕ್ಷಗಟ್ಟಲೆ ಸಾಲವಿದೆ. ಭ್ರಷ್ಟಾಚಾರ ಇಲ್ಲವೆಂಬ ಸರ್ಕಾರದ ವಾದವನ್ನು ಒಂದೊಮ್ಮೆ ಒಪ್ಪಿದರೂ, ಸಾಲದ ಮೊತ್ತ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಒಂದೊಮ್ಮೆ ಅದನ್ನು ಸರಿಯಾಗಿ ಬಳಸಿಕೊಂಡಿದ್ದರೆ ನಮ್ಮ ದೇಶ ಸೌದಿ, ಬ್ರಟಿನ್‌ ಅಥವಾ ಸ್ಪೇನ್‌ಗಿಂತ ಸುಂದರ ದೇಶವಾಗಬಹುದಿತ್ತು’ ಎಂದು ರಾಣಾ ಅಸಮಾಧಾನ ವ್ಯಕ್ತಪಡಿಸಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬ್ರಿಟನ್‌ಗೆ ಶಿಕ್ಷಣಕ್ಕೆ ಹೋಗಲು ಇನ್ನು ಯುಎಇ ನೆರವು ಇಲ್ಲ!
ಜನರು ಒಪ್ಪಲಿ, ಬಿಡಲಿ, ಬಲವಂತವಾಗಿ ಆದ್ರೂ ಗ್ರೀನ್‌ಲ್ಯಾಂಡ್‌ ವಶ : ಟ್ರಂಪ್‌ ಪಣ