
ಕಾರವಾರ (ಸೆ.28): ಕವಿತೆ, ವಿಶ್ವ ಕಾವ್ಯ ಪ್ರದರ್ಶನಕ್ಕಾಗಿಯೇ ಇರುವ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿ ಅಂಕೋಲಾದ ಕವಯತ್ರಿ ರೇಣುಕಾ ರಮಾನಂದ ಅವರ ಕವಿತೆ ಸ್ಥಾನ ಪಡೆದಿದೆ.
ಭಾರತದ 15 ಭಾಷೆಗಳ ಇಪ್ಪತ್ತೆಂಟು ಕವಿಗಳ 250 ಕವಿತೆಗಳು, ಕವಿಗಳ ಕೈಬರಹ, ಅವರದ್ದೇ ವಾಚನದ ವಿಡಿಯೋ, ಅದರ ಇಂಗ್ಲಿಷ್ ಅನುವಾದದ ಪ್ರದರ್ಶನ ಸೆ.26 ಆರಂಭವಾಗಿದೆ. ಈ ಪ್ರದರ್ಶನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಅಂಕೋಲೆಯ ಕವಯತ್ರಿ ರೇಣುಕಾ ರಮಾನಂದರ ಕನ್ನಡ ಕವಿತೆಯೂ ಇರುವುದು ವಿಶೇಷ.
ಟ್ರಂಪ್ ಜತೆ ಸೇರಿಕೊಂಡ ಪುಟಿನ್, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಹೆಸರು .
ಇದು ಗ್ಲೋಬಲ್ ಪೊಯೆಟ್ರಿ ಪ್ಯಾಚ್ ವರ್ಕ್ನ ರಕ್ ರಾರಯಕ್ ಕಲಾಕವನ ಅನುಸ್ಥಾಪನಾ ಯೋಜನೆಯಾಗಿದ್ದು, ಇದರಲ್ಲಿ ಭಾರತ ದೇಶದ ವೈವಿಧ್ಯತೆಯನ್ನು ಸಂಭ್ರಮಿಸುವ ಬಹುಭಾಷಿಕ ಹಾಗೂ ಪ್ರಾಂತಿಕ ವಿಚಾರ ಧ್ವನಿಸುವ ಭಾರತೀಯ ಭಾಷೆಯ ಕವಿತೆಗಳನ್ನು ಒಳಗೊಂಡಿವೆ. ಪ್ರಖ್ಯಾತ ಕವಯತ್ರಿ ಮಮತಾ ಸಾಗರ ಈ ಕವನಗಳ ಆಯ್ಕೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ