Omicron Threat: ಹೊಸ ತಳಿ ಬಗ್ಗೆ ಶಾಕಿಂಗ್ ಮಾಹಿತಿ ಕೊಟ್ಟ ತಜ್ಞರು!

Published : Dec 21, 2021, 09:57 AM IST
Omicron Threat: ಹೊಸ ತಳಿ ಬಗ್ಗೆ ಶಾಕಿಂಗ್ ಮಾಹಿತಿ ಕೊಟ್ಟ ತಜ್ಞರು!

ಸಾರಾಂಶ

* ದಿನೇ ದಿನೇ ಹೆಚ್ಚುತ್ತಿದೆ ಒಮಿಕ್ರಾನ್ ಆತಂಕ * ಒಮಿಕ್ರಾನ್ ಬಗ್ಗೆ ಆತಂಕಕಾರಿ ಮಾಹಿತಿ ಕೊಟ್ಟ ತಜ್ಞರು * ಲಸಿಕೆ ಪಡೆಯದವರಿಗೆ ಮತ್ತಷ್ಟು ಆತಂಕ

ನವದೆಹಲಿ(ಡಿ.21): ಕೊರೋನಾವೈರಸ್ 'ಓಮಿಕ್ರಾನ್' ನ ಹೊಸ ರೂಪಾಂತರವನ್ನು ಮೊದಲು ಗುರುತಿಸಿದ ಡಾ ಎಂಜೆಲಿಕ್ ಕೊಯೆಟ್ಜಿ ಅವರು ಆಘಾತಕಾರಿ ಮಾಹಿತಿಯನ್ನು ನೀಡಿದ್ದಾರೆ. ದಕ್ಷಿಣ ಆಫ್ರಿಕಾದ ಐಸಿಯುಗೆ ದಾಖಲಾಗಿರುವ 10 ಓಮಿಕ್ರಾನ್ ರೋಗಿಗಳಲ್ಲಿ 9 ಮಂದಿಗೆ ಲಸಿಕೆ ನೀಡಲಾಗಿಲ್ಲ ಎಂದು ಅವರು ಸೋಮವಾರ ತಿಳಿಸಿದರು. ಇದಕ್ಕೂ ಮುಂಚೆಯೇ, ಈ ಹೊಸ ರೂಪದ ಕೊರೋನವೈರಸ್ ವಿರುದ್ಧ ವ್ಯಾಕ್ಸಿನೇಷನ್ ಪಾತ್ರವನ್ನು ಪ್ರಮುಖವೆಂದು ಅನೇಕ ತಜ್ಞರು ಹೇಳಿದ್ದಾರೆ. ಓಮಿಕ್ರಾನ್ ರೂಪಾಂತರವು ವೇಗವಾಗಿ ಹರಡಲಿದೆ ಎಂದು ಡಾ ಕೋಟ್ಜಿ (Dr Angelique Coetzee) ಹೇಳಿದರು. ಭಾರತದಲ್ಲಿ ಇದುವರೆಗೆ 161 ಒಮಿಕ್ರಾನ್ ಪ್ರಕರಣಗಳು ಕಂಡುಬಂದಿವೆ. ಆದಾಗ್ಯೂ, ಈ ರೋಗಿಗಳಲ್ಲಿ ಹೆಚ್ಚಿನವರಲ್ಲಿ ಸೌಮ್ಯ ರೋಗಲಕ್ಷಣಗಳಷ್ಟೇ ಕಂಡು ಬಂದಿವೆ.

ಸುದ್ದಿ ಸಂಸ್ಥೆ ANI ಪ್ರಕಾರ, ಹೊಸ ತಳಿ ಲಸಿಕೆ ಹಾಕಿದ ಜನರನ್ನು ಗಂಭೀರವಾಗಿ ಅಸ್ವಸ್ಥಗೊಳಿಸದಿದ್ದರೂ, ಲಸಿಕೆ ಪಡೆಯದವರಿಗೆ ಇದರಿಂದ ಕೆಟ್ಟದಾಗಿ ಸೋಂಕು ತಗುಲುತ್ತದೆ ಎಂದು ಡಾ ಕೋಟ್ಜಿ ಎಚ್ಚರಿಸಿದ್ದಾರೆ. 'ಓಮಿಕ್ರಾನ್‌ನ ತೀವ್ರತೆಯ ಬಗ್ಗೆ ನಿಮ್ಮ ವೈದ್ಯರು ಏನು ಹೇಳುತ್ತಾರೆಂದು ನನಗೆ ತಿಳಿದಿಲ್ಲ, ಆದರೆ ಓಮಿಕ್ರಾನ್‌ನ ಗಂಭೀರ ಪ್ರಕರಣವನ್ನು ನಾನು ಇನ್ನೂ ನೋಡಿಲ್ಲ. ಆಶಾದಾಯಕವಾಗಿ ಅವರು ನಮ್ಮಂತಹ ಸೌಮ್ಯ ಪ್ರಕರಣಗಳನ್ನು ಮಾತ್ರ ನೋಡುತ್ತಿದ್ದಾರೆ, ಆದರೆ ಲಸಿಕೆ ಪಡೆಯದವರಿಗೆ ಈ ಸೋಂಕು ಗಂಭೀರವಾಗಿ ಕಾಡುತ್ತದೆ ಮತ್ತು ಆಸ್ಪತ್ರೆಗೆ ಸೇರಿಸಬೇಕಾಗಬಹುದು ಎಂದಿದ್ದಾರೆ.

'ಲಸಿಕೆ ಹಾಕದವರನ್ನೇ ಐಸಿಯುಗೆ ಸೇರಿಸಬೇಕಾಗಬಹುದು. ನಮ್ಮ ದೇಶದಲ್ಲಿ, ಲಸಿಕೆ ಪಡೆದ ಜನರು ಲಸಿಕೆ ಪಡೆಯದವರಿಗಿಂತ ಸೌಮ್ಯವಾದ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ ಎಂದು ನಾನು ಹೇಳಲೇಬೇಕು. ಆದರೆ ಇಂದು ಈ ಚಿತ್ರಣ ಬದಲಾಗಿದೆ. ಇಂದು, ನಾನು ಲಸಿಕೆಯನ್ನು ಪಡೆದ ಅನೇಕ ಜನರನ್ನು ನೋಡಿದ್ದೇನೆ, ಅವರು ಪುನರಾವರ್ತಿತ ಅಥವಾ ಪ್ರಗತಿಯ ಸೋಂಕನ್ನು ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಡಾ. ಕೊಯೆಟ್ಜೀ ಸುಮಾರು 100 ಓಮಿಕ್ರಾನ್ ರೋಗಿಗಳನ್ನು ಪರಿಸೀಲಿಸಿದ್ದಾರೆ. ಹೊಸ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ವೇಗವಾಗಿ ಹರಡುತ್ತದೆ ಎಂದು ಅವರು ಹೇಳುತ್ತಾರೆ. 'ನಾನು ನೋಡಿದ 100 ರೋಗಿಗಳ ಪರಿಶೀಲನೆ ಅನ್ವಯ, ಓಮಿಕ್ರಾನ್ ವೇಗವಾಗಿ ಹರಡುತ್ತದೆ ಎಂದು ನಾನು ಗಮನಿಸಿದ್ದೇನೆ. ಡೆಲ್ಟಾವನ್ನು ಹರಡುವ ವೇಗ ಬಹಳ ಕಡಿಮೆ, ಇದು ಖಂಡಿತವಾಗಿಯೂ ಬಹಳ ವೇಗವಾಗಿ ಹರಡುತ್ತದೆ. ಕುಟುಂಬದ ಒಬ್ಬ ರೋಗಿಯು ಕುಟುಂಬದ ಸುಮಾರು ಶೇ 90 ರಷ್ಟು ಸೋಂಕಿಗೆ ಒಳಗಾಗಬಹುದು.

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆಯಾಗಿ ಸುಮಾರು 5 ವಾರಗಳಾಗಿವೆ ಎಂದು ಅವರು ವಿವರಿಸಿದರು. ದೇಹದ ನೋವು, ತಲೆನೋವು, ಆಯಾಸ, ಒಣ ಕೆಮ್ಮು ಮತ್ತು ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕಿನಂತಹ ರೋಗಲಕ್ಷಣಗಳು ಹೆಚ್ಚಿನ ರೋಗಿಗಳಲ್ಲಿ ಕಂಡುಬರುತ್ತವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!