
ದುಬೈ/ರಿಯಾದ್/ಟೆಹ್ರಾನ್: ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ಈಗ ಇಡೀ ಗಲ್ಫ್ ವಲಯದ ಮೇಲೆ ತನ್ನ ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್ನಲ್ಲಿ ಭೀಕರ ಸ್ಫೋಟಗಳು ಸಂಭವಿಸುತ್ತಿವೆ. ಭಾರತೀಯರು ಹೆಚ್ಚಾಗಿ ವಾಸಿಸುವ ಗಲ್ಫ್ ಪ್ರದೇಶಗಳಾದ ದುಬೈ, ಅಬುಧಾಬಿಯಲ್ಲೂ ಭೀಕರ ದಾಳಿ ನಡೆಸಿದೆ. ಸೌದಿ ಅರೇಬಿಯಾ ರಾಜಧಾನಿ ರಿಯಾದ್, ಬಹರನ್ ರಾಜಧಾನಿ ಮನಾಮಾ ಹಾಗೂ ಕತಾರ್ ರಾಜಧಾನಿ ದೋಹಾದಲ್ಲೂ ಸ್ಫೋಟದ ಸದ್ದು ಕೇಳಿಬಂದಿದ್ದು, ಇದು ತಾನೇ ನಡೆಸಿರುವ ದಾಳಿ ಎಂದು ಇರಾನ್ ಹೇಳಿಕೊಂಡಿದೆ.
ಇರಾನ್ನ 'ಫಾರ್ಸ್' (Fars) ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನಾಲ್ಕು ಅತ್ಯಂತ ಪ್ರಮುಖ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ:
ಕತಾರ್: ಅಲ್-ಉದೈದ್ (Al-Udeid) ವಾಯುನೆಲೆ.
ಕುವೈತ್: ಅಲ್-ಸಲೇಮ್ (Al-Salem) ವಾಯುನೆಲೆ.
ಯುಎಇ: ಅಲ್-ಧಫ್ರಾ (Al-Dhafra) ವಾಯುನೆಲೆ.
ಬಹ್ರೇನ್: ಅಮೆರಿಕದ 5ನೇ ನೌಕಾಪಡೆ ನೆಲೆ.
ರಾಜಧಾನಿ ರಿಯಾದ್ನಲ್ಲಿ ಭೀಕರ ಸ್ಫೋಟಗಳು ಸಂಭವಿಸಿವೆ ಎಂದು ಎಎಫ್ಪಿ (AFP) ವರದಿ ಮಾಡಿದೆ. : ಅಬುಧಾಬಿ ಮಾತ್ರವಲ್ಲದೆ ಈಗ ಪ್ರವಾಸಿಗರ ಸ್ವರ್ಗ ದುಬೈನಲ್ಲೂ ಸರಣಿ ಸ್ಫೋಟಗಳ ವರದಿಯಾಗುತ್ತಿವೆ. ಅಬುಧಾಬಿಯ ವಾಯುಪ್ರದೇಶವನ್ನು ಈಗಾಗಲೇ ಬಂದ್ ಮಾಡಲಾಗಿದೆ. ರಾಜಧಾನಿ ಮನಮಾದಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ಬೆನ್ನಲ್ಲೇ ಮತ್ತೊಂದು ಭೀಕರ ಸ್ಫೋಟದ ಸದ್ದು ಕೇಳಿಬಂದಿದೆ.
ಇರಾನ್ನಿಂದ ಹಾರಿಸಲಾದ ಹಲವಾರು ಕ್ಷಿಪಣಿಗಳನ್ನು ತಡೆಹಿಡಿದ ನಂತರ, ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಜಧಾನಿ ಅಬುಧಾಬಿಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ದೇಶದ ರಾಜ್ಯ ಸುದ್ದಿ ಸಂಸ್ಥೆ ತಿಳಿಸಿದೆ. "ಈ ದಾಳಿಯು ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ಯುಎಇ ಹೇಳಿದೆ. "ಈ ಉಲ್ಬಣಕ್ಕೆ ಪ್ರತಿಕ್ರಿಯಿಸುವ ಸಂಪೂರ್ಣ ಹಕ್ಕನ್ನು ಅದು ಕಾಯ್ದಿರಿಸಿದೆ" ಎಂದು ಹೇಳಿಕೆ ನೀಡಿದೆ.
ಕತಾರ್ ರಾಜಧಾನಿ ದೋಹಾದಲ್ಲಿ ಹಲವು ಸ್ಫೋಟದ ಸದ್ದುಗಳು ಕೇಳಿಬಂದಿವೆ. ಆದರೆ, ಇರಾನ್ನಿಂದ ಬಂದ ಎಲ್ಲಾ ಕ್ಷಿಪಣಿಗಳನ್ನು ತನ್ನ ರಕ್ಷಣಾ ವ್ಯವಸ್ಥೆಯ ಮೂಲಕ ಯಶಸ್ವಿಯಾಗಿ ಹೊಡೆದುರುಳಿಸಿರುವುದಾಗಿ ಕತಾರ್ ರಕ್ಷಣಾ ಸಚಿವಾಲಯ ತಿಳಿಸಿದೆ. "ನಮ್ಮ ಭದ್ರತಾ ಯೋಜನೆಯಂತೆ ತಕ್ಷಣವೇ ಕ್ರಮ ಕೈಗೊಂಡು ನಾಗರಿಕರ ರಕ್ಷಣೆ ಮಾಡಲಾಗಿದೆ" ಎಂದು ಕತಾರ್ ಹೇಳಿದೆ.
ಟರ್ಕಿಶ್ ಏರ್ಲೈನ್ಸ್ ಮಾರ್ಚ್ 2 ರವರೆಗೆ ಲೆಬನಾನ್, ಸಿರಿಯಾ, ಇರಾಕ್, ಇರಾನ್ ಮತ್ತು ಜೋರ್ಡಾನ್ ಗೆ ವಿಮಾನಗಳನ್ನು ರದ್ದುಗೊಳಿಸಿರವುದಾಗಿ ತಿಳಿಸಿದೆ.
ಇತ್ತ ಪಶ್ಚಿಮ ಇರಾನ್ನ ಉರ್ಮಿಯಾ (Urmia) ನಗರದ ಮೇಲೆ ಇಸ್ರೇಲ್ ಸೇನೆ ದಾಳಿ ಆರಂಭಿಸಿದೆ. ದಾಳಿಗೂ ಮುನ್ನ ಇಸ್ರೇಲ್ ಸೇನೆಯ ವಕ್ತಾರರು ಇರಾನ್ನ ಮಿಲಿಟರಿ ಸ್ಥಾವರಗಳ ಸಮೀಪವಿರುವ ಎಲ್ಲಾ ನಿವಾಸಿಗಳಿಗೆ ತಕ್ಷಣವೇ ಜಾಗ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ