
ಕಾಬೂಲ್ (ಅ.23) ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಎರಡೂ ಕಡೆಯಿಂದ ಪ್ರತಿ ದಾಳಿಗಳು ನಡೆದಿದೆ. ಇದರ ನಡುವೆ ಹಲವು ಬಾರಿ ಕದನ ವಿರಾಮ ಉಲ್ಲಂಘನೆಯೂ ಆಗಿದೆ. ಇತ್ತೀಚೆಗೆ ದೋಹಾದಲ್ಲಿ ಕದನ ವಿರಾಮ ಘೋಷಣೆಯಾದ ಬಳಿಕ ಏರ್ಸ್ಟ್ರೈಕ್, ಪ್ರತಿದಾಳಿಗಳು ನಡೆದಿಲ್ಲ ನಿಜ. ಆದರೆ ಕುತುಂತ್ರ ಬುದ್ಧಿ ತೋರಿಸುತ್ತಿರುವ ಪಾಕಿಸ್ತಾನಕ್ಕೆ ಇದೀಗ ಆಪ್ಘಾನಿಸ್ತಾನದ ತೆಹ್ರಿಕ್ ಇ ತಾಲಿಬಾನ್ (ಟಿಟಿಪಿ) ನೀಡಿದ ಎಚ್ಚರಿಕೆ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ಗೆ ನೇರ ಸವಾಲು ಹಾಕಿದ್ದಾರೆ. ನೀನು ಗಂಡಸೇ ಆಗಿದ್ದರೆ, ತಾಯಿ ಎದೆಹಾಲು ಕುಡಿದಿದ್ದರೆ ಬಾ, ನೇರಾ ನೇರ ಯುದ್ಧಕ್ಕೆ ಎಂದು ಪಂಥಾಹ್ವಾನ ನೀಡಿದೆ.
ಟಿಟಿಪಿ ಕಮಾಂಡರ್ ಕಾಝಿಮ್ ಇದೀಗ ಸರಣಿ ವಿಡಿಯೋ ಮಾಡಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಖಾಝಿಮ್ ತಲೆಹೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಈ ಆದೇಶ ಹೊರಡಿಸಿದ ಬೆನ್ನಲ್ಲೇ ಖಾಝಿಮ್ ನೇರವಾಗಿ ಆಸೀಮ್ ಮುನೀರ್ಗೆ ಸವಾಲು ಹಾಕಿದ್ದಾರೆ. ಯುದ್ಧಕ್ಕೆ ಬರುವಾದಾದರೇ ನೇರಾನೇರ ಬನ್ನಿ, ಕುತಂತ್ರ ಬುದ್ದಿ ತೋರಿಸುತ್ತಿದ್ದೀರಿ. ನಿಮಗೆ ಧೈರ್ಯವಿದ್ದರೆ ಬನ್ನಿ ಹೋರಾಟಕ್ಕೆ ಎಂದು ಕಾಝಿಮ್ ಎಚ್ಚರಿಸಿದ್ದಾರೆ.
ಇತ್ತೀಗೆ ಪಾಕಿಸ್ತಾನ ಸೇನೆ ಮೇಲೆ ದಾಳಿ, ಬಾಂಬ್ ದಾಳಿಗಳ ಮಾಸ್ಟರ್ ಮೈಂಡರ್ ಟಿಟಿಪಿ ಕಮಾಂಡರ್ ಕಾಝಿಮ್ ಎಂದು ಪಾಕಿಸ್ತಾನ ಘೋಷಿಸಿತ್ತು. ಇಷ್ಟೇ ಅಲ್ಲ ಖಾಝಿಮ್ ಸೆರೆ ಹಿಡಿಯಲು ಪಾಕಿಸ್ತಾನ ಸೇನೆ ಭಾರಿ ಕಸರತ್ತು ಮಾಡುತ್ತಿದೆ. ಇದರ ನಡುವೆ ಸುಳಿವು ಟಿಟಿಪಿ ಕಮಾಂಡರ್ ಖಾಝಿಮ್ ಸುಳಿವು ನೀಡಿದವರಿಗೆ 10 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿತ್ತು. ಇದು ತಾಲಿಬಾನ್ ಕೆರಳಿಸಿದೆ. ಇದರ ಬೆನ್ನಲ್ಲೇ ವಿಡಿಯೋ ಮೂಲಕ ಎಚ್ಚರಿಕೆ ನೀಡಲಾಗಿದೆ.
ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ತೀವ್ರವಾಗಿದೆ. ಇದರ ನಡುವೆ ಆಫ್ಘಾನಿಸ್ತಾನಕ್ಕೆ ಭಾರತ ಬೆಂಬಲ ನೀಡುತ್ತಿದೆ ಎಂಬ ಪಾಕಿಸ್ತಾನ ರಕ್ಷಣಾ ಸಚಿವರ ಹೇಳಿಕೆಗೆ ತಿರುಗೇಟು ನೀಡಿದೆ. ಈ ಕುರಿತು ಮಾತನಾಡಿರುವ ಅಫ್ಘಾನಿಸ್ತಾನ, ಆಫ್ಘಾನಿಸ್ತಾನ ಪಾಕಿಸ್ತಾನ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತ ಮಧ್ಯ ಪ್ರವೇಶ ಮಾಡಿಲ್ಲ. ಈ ರೀತಿ ಆರೋಪ ಆಧಾರ ರಹಿತ. ಪಾಕಿಸ್ತಾನಕ್ಕೆ ಏನೂ ತಿಳಿಯದಾಗಿದೆ, ಕುತಂತ್ರದಿಂದ ಎಲ್ಲವನ್ನೂ ಕೈವಶ ಮಾಡಲು ಹೊರಟಿದೆ. ಆದರೆ ಆಫ್ಘಾನಿಸ್ತಾನ ಮುಂದೆ ಸಾಧ್ಯವಿಲ್ಲ ಎಂದು ಎಚ್ಚರಿಸಿದೆ. ಭಾರತ ಜೊತೆಗಿನ ಆಫ್ಘಾನಿಸ್ತಾನ ಸಂಬಂಧ ದೇಶದ ಹಿತಾಸಕ್ತಿ ಮಾಡಿಕೊಂಡ ಸಂಬಂಧ. ಇದು ಆಫ್ಘಾನಿಸ್ತಾನ ಜನತೆಯ ಹಿತಾಸಕ್ತಿಗೆ ಅನುಗುಣವಾಗಿ, ಅಫ್ಘಾನಿಸ್ತಾನದ ಅಭಿವೃದ್ಧಿಗಾಗಿ ಮಾಡಿಕೊಂಡಿರುವ ಸಂಬಂಧ ಎಂದಿದೆ. ಆಫ್ಘಾನಿಸ್ತಾನ ಸ್ವತಂತ್ರ ದೇಶ, ಇದು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ