
ಇಸ್ಲಮಾಬಾದ್(ಸೆ.21): ಮಸೀದಿಯಿಂದ ಕುಡಿಯುವ ನೀರನ್ನು ತೆಗೆದುಕೊಂಡು ಬಂದಿದ್ದಕ್ಕೆ ಹಿಂದೂ ಕುಟುಂಬವನ್ನು ಥಳಿಸಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಆನಂತರವೂ ಸ್ಥಳೀಯ ಜಮೀನ್ದಾರರು ಆ ಕುಟುಂಬವನ್ನು ಒತ್ತೆಯಾಗಿರಿಸಿಕೊಂಡು ಹಿಂಸೆ ನೀಡಿದ್ದಾರೆ.
ಪಂಜಾಬ್ ಪ್ರಾಂತ್ಯದಲ್ಲಿ ಹತ್ತಿ ಕೀಳುವ ಕಾಯಕ ಮಾಡುವ ಅಲಾಂ ರಾಮ್ ಬೀಲ್ ಎನ್ನುವ ವ್ಯಕ್ತಿಯ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದೆ. ‘ತುಂಬಾ ಬಾಯಾರಿದ್ದರಿಂದ ನೀರು ಕುಡಿಯಲು ಮಸೀದಿಯ ಒಳಗೆ ಹೋಗಿದ್ದೆವು, ಆಗ ಸ್ಥಳೀಯ ಜಮೀನ್ದಾರರು ಅವರ ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸಿದೆವು ಎಂದು ನಮ್ಮನ್ನು ಥಳಿಸಿದರು. ಹತ್ತಿ ಕೀಳುವ ಕೆಲಸ ಮುಗಿಸಿ ಹೋಗುವಾಗ ಮತ್ತೆ ಇದೇ ವಿಷಯಕ್ಕೆ ನಮ್ಮನ್ನು ಒತ್ತೆಯಾಗಿರಿಸಿಕೊಂಡು ಹಿಂಸೆ ನೀಡಿದರು’ ಎಂದು ಬೀಲ್ ಹೇಳಿದ್ದಾರೆ.
ದುಷ್ಕರ್ಮಿಗಳು ಸ್ಥಳಿಯ ಸಂಸದ, ಪ್ರಧಾನಿ ಇಮ್ರಾನ್ ಖಾನ್ಗೆ ಬೇಕಾದವರು ಎಂಬ ಕಾರಣಕ್ಕೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಘಟನೆಯ ಬಗ್ಗೆ ಪಂಜಾಬ್ ಪ್ರಾಂತ್ಯದ ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷರಿಗೆ ತಿಳಿದಿದ್ದರೂ, ಆಡಳಿತ ಪಕ್ಷಕ್ಕೆ ಹೆದರಿ ಪ್ರಕರಣದಿಂದ ದೂರ ಉಳಿದಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ