ಸಿಂದೂರ ವೇಳೆ ಚೀನಾ ಮಧ್ಯಸ್ಥಿಕೆ ವಹಿಸಿತ್ತು : ಪಾಕ್‌

Kannadaprabha News   | Kannada Prabha
Published : Jan 04, 2026, 05:43 AM IST
Pak India China

ಸಾರಾಂಶ

‘ಆಪರೇಷನ್‌ ಸಿಂದೂರದ ವೇಳೆಯಲ್ಲಿ ಭಾರತ-ಪಾಕ್‌ ನಡುವಿನ ಉದ್ವಿಗ್ನತೆಯನ್ನು ತಣಿಸುವಲ್ಲಿ ಚೀನಾ ಪ್ರಮುಖ ಪಾತ್ರ ವಹಿಸಿತ್ತು’ ಎಂದು ಪಾಕಿಸ್ತಾನ ಹೇಳಿದೆ. ಈ ಮೂಲಕ, ತನ್ನ ಮಧ್ಯಸ್ಥಿಕೆಯಿಂದ ಯುದ್ಧ ನಿಂತಿತು ಎಂಬ ಚೀನಾದ ವಾದವನ್ನು ಪಾಕ್‌ ಬೆಂಬಲಿಸಿದೆ.

ಇಸ್ಲಾಮಾಬಾದ್‌: ‘ಆಪರೇಷನ್‌ ಸಿಂದೂರದ ವೇಳೆಯಲ್ಲಿ ಭಾರತ-ಪಾಕ್‌ ನಡುವಿನ ಉದ್ವಿಗ್ನತೆಯನ್ನು ತಣಿಸುವಲ್ಲಿ ಚೀನಾ ಪ್ರಮುಖ ಪಾತ್ರ ವಹಿಸಿತ್ತು’ ಎಂದು ಪಾಕಿಸ್ತಾನ ಹೇಳಿದೆ. ಈ ಮೂಲಕ, ತನ್ನ ಮಧ್ಯಸ್ಥಿಕೆಯಿಂದ ಯುದ್ಧ ನಿಂತಿತು ಎಂಬ ಚೀನಾದ ವಾದವನ್ನು ಪಾಕ್‌ ಬೆಂಬಲಿಸಿದೆ.

ನಮ್ಮ ಅಧಿಕಾರಿಗಳೊಂದಿಗೆ ಚೀನಾ ನಿರಂತರ ಸಂಪರ್ಕದಲ್ಲಿತ್ತು

ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್‌ ಅನ್ದರ್ಬಿ ಮಾತನಾಡಿ, ‘ನಮ್ಮ ಅಧಿಕಾರಿಗಳೊಂದಿಗೆ ಚೀನಾ ನಿರಂತರ ಸಂಪರ್ಕದಲ್ಲಿತ್ತು. ಮೇ 6ರಿಂದ 10ರ ವರೆಗೆ ನಡೆದ ದಾಳಿಗಳ ಮುನ್ನ ಹಾಗೂ ಬಳಿಕ ಭಾರತದ ಅಧಿಕಾರಿಗಳನ್ನೂ ಸಂಪರ್ಕಿಸಿದ್ದರು. ಹೀಗೆ ಶಾಂತಿ ಹಾಗೂ ಭದ್ರತೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು’ ಎಂದರು.

ಚೀನಾ ಮಧ್ಯಸ್ಥಿಕೆ ಎಂದಿದ್ದರು

ಇತ್ತೀಚೆಗಷ್ಟೇ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ, ‘2025ರಲ್ಲಿ ಚೀನಾ ಮಧ್ಯಸ್ಥಿಕೆ ವಹಿಸಿದ ಸಮಸ್ಯೆಗಳ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯೂ ಸೇರಿತ್ತು’ ಎಂದಿದ್ದರು. ಇದನ್ನು ಭಾರತ ಅಲ್ಲಗಳೆದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತೆಪ್ಪಗಿರಿ : ಇರಾನ್‌ ಪ್ರತಿಭಟನಾಕಾರರಿಗೆ ಖಮೇನಿ ಎಚ್ಚರಿಕೆ
ಬಾಂಗ್ಲಾ: ದಾಳಿಗೀಡಾಗಿದ್ದ ಹಿಂದು ವ್ಯಕ್ತಿ ಸಾವು