ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದ ಮಹಿಳೆ.. ವಿಡಿಯೋ ವೈರಲ್

By Suvarna NewsFirst Published Jan 27, 2022, 4:08 PM IST
Highlights
  • ಅಪಘಾತದಿಂದ ಪಾರಾದ ಮಹಿಳೆ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌
  • ಈಶಾನ್ಯ ಲಂಡನ್‌ನಲ್ಲಿ ಘಟನೆ

ಲಂಡನ್‌(ಜ.27): ಮಹಿಳೆಯೊಬ್ಬರು ಬಸ್‌ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಈ ಘಟನೆಯ ರೋಚಕ ದೃಶ್ಯ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.  ಬಸ್‌ ಇನ್ನೇನು ಡಿಕ್ಕಿ ಹೊಡೆದೇ ಬಿಟ್ಟಿತು ಎನ್ನುವಷ್ಟು ಹತ್ತಿರ ಬಂದಿದ್ದು, ಅದೃಷ್ಟವಶಾತ್‌ ಮಹಿಳೆ ಕ್ಷಣದಲ್ಲಿ ಪಾರಾಗಿದ್ದಾಳೆ. ಅಲ್ಲದೇ ಬಸ್‌ ನಂತರ ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಈಶಾನ್ಯ ಲಂಡನ್‌ನಲ್ಲಿ ಈ ಘಟನೆ ನಡೆದಿದೆ. ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಡಬ್ಬಲ್‌ ಡೆಕ್ಕರ್‌ ಬಸ್ ಇದಾಗಿದ್ದು, ಬಸ್‌ ಬಂದ ರಭಸಕ್ಕೆ ಜೀಬ್ರಾ ಕ್ರಾಸಿಂಗ್‌ನಲ್ಲಿ ನಿಂತ ಮಹಿಳೆಗೆ ಡಿಕ್ಕಿ ಹೊಡೆಯುವುದು ಸ್ವಲ್ಪದರಲ್ಲೇ ತಪ್ಪಿದೆ. ಪ್ರಸ್ತುತ ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹೈಮ್ಸ್ ಪಾರ್ಕ್‌ನ (Highams Park) ಸೆಲ್ವಿನ್ ಅವೆನ್ಯೂದಲ್ಲಿ (Selwyn Avenue) ಈ ಅವಘಡ ಸಂಭವಿಸಿದೆ. ಬ್ರಾಡ್‌ವೇ(Broadway)ಯಲ್ಲಿರುವ ದಿ ಕಾರ್ನರ್ ಕೆಫೆಯ (The Corner Cafe) ಹೊರಗೆ ರಸ್ತೆ ದಾಟುತ್ತಿದ್ದಾಗ ಬಸ್ಸು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದಿರುವಂತೆ ಈ ದೃಶ್ಯ ಕಾಣುತ್ತಿದೆ. ನಂತರ ಬಸ್‌ ಅಂಗಡಿಯೊಂದಕ್ಕೆ  ಡಿಕ್ಕಿ ಹೊಡೆಯುವ ಕೆಲವೇ ನಿಮಿಷಗಳ ಮೊದಲು ಇದು ಸಂಭವಿಸಿದೆ. ಈ ಘಟನೆಯಲ್ಲಿ ಬಸ್‌ನಲ್ಲಿದ್ದ 19 ಜನರಿಗೆ ಗಾಯಗಳಾಗಿದ್ದು, ಅವರಿಗೆ ಸ್ಥಳದಲ್ಲೇ ವೈದ್ಯಕೀಯ ತಂಡವನ್ನು ಕರೆಸಿ ಚಿಕಿತ್ಸೆ ನೀಡಲಾಯಿತು. ಗಂಭೀರ ಗಾಯಗೊಂಡ ಮೂರು ಮಕ್ಕಳು ಮತ್ತು ಇಬ್ಬರು ವಯಸ್ಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. 

 

ಘಟನೆಯ ಸಿಸಿಟಿವಿ ದೃಶ್ಯವನ್ನು ಕೆಫೆಯ ಮಾಲೀಕ ಎರಿಕ್ ಗರಿಪ್ (Eric Garip) ಪೋಸ್ಟ್ ಮಾಡಿದ್ದಾರೆ.  ಈ ಅಪಘಾತವಾಗಿ ನಿಮಿಷದ ನಂತರ ಅಪಘಾತದಲ್ಲಿ ಪಾರಾದ ಮಹಿಳೆ ಕಾರ್ನರ್ ಕೆಫೆಗೆ ಬಂದಿದ್ದು, ಆಕೆಯ ಮುಖ ಆಘಾತಗೊಂಡಂತಿತ್ತು, ಆತ ನನ್ನ ಮೇಲೆಯೇ ಗಾಡಿ ಓಡಿಸಿ ಬಿಡುತ್ತಿದ್ದ. ನನಗಿದನ್ನು ನಂಬಲಾಗುತ್ತಿಲ್ಲ. ನಾನು ಕ್ಷಣದಲ್ಲಿ ಆತ ಬರುತ್ತಿದ್ದ ದಾರಿಯಿಂದ ಇತ್ತ ಬಂದೆ ಎಂದು ಆಕೆ ಹೇಳಿದಳು. ನಾನು ಆಕೆಗೆ ಒಂದು ಗ್ಲಾಸ್‌ ನೀರು ಕೊಟ್ಟೆ ನಂತರ ಆಕೆ ಹೊರಟು ಹೋದಳು ಎಂದು ಕೆಫೆಯ ವೈಟರ್‌ ಟೀನಾ ಹೋಗನ್ (Tina Hogan) ಹೇಳಿದರು. 

ಒಟ್ಟೊಟ್ಟಿಗೆ ಎದುರಾದ ಎರಡೆರಡು ಅಪಘಾತಗಳಿಂದ ಎಸ್ಕೇಪ್ ಆದ ಯುವಕ... ವಿಡಿಯೋ ವೈರಲ್‌

ಇನ್ನು ಈ ಘಟನೆಗೆ ಸಾಕ್ಷಿಯಾದವರು ಬಹುಶಃ ಚಾಲಕ ತನ್ನ ಪ್ರಜ್ಞೆ ಕಳೆದುಕೊಂಡಿರಬೇಕು ಎಂದು ಹೇಳಿದರು. ಒಟ್ಟಿನಲ್ಲಿ ಮಹಿಳೆಗಂತೂ ಈ ಭಯಾನಕ ಅವಘಡದಿಂದ ಶಾಕ್ ಉಂಟಾಗಿದಂತು ನಿಜ. 

ಇತ್ತೀಚೆಗೆ  ಸ್ಕೂಟರ್ ಸವಾರನೋರ್ವ ಒಂದೇ ದಿನ ಎರೆಡರಡು ಅಪಘಾತಗಳಿಂದ ಪಾರಾದ ಘಟನೆ ಕರಾವಳಿ ನಗರಿ ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದು, ಘಟನೆಯ ದೃಶ್ಯಾವಳಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಚಾಲಕನ ಚಾಕಚಕ್ಯತೆ, ಚುರುಕುತನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕೊಣಾಜೆ (Konaje) ಪೊಲೀಸ್ ಠಾಣಾ ವ್ಯಾಪ್ತಿಯ ಎಲಿಯಾರುಪದವು ಎಂಬಲ್ಲಿ ಈ ಘಟನೆ ನಡೆದಿದೆ. ಅತಿವೇಗದಿಂದ ಬಂದ ಸ್ಕೂಟರ್ ಸವಾರನೋರ್ವ ತಿರುಗುತ್ತಿದ್ದ ಬಸ್ಸು ಸ್ಕೂಟರ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಧಾವಂತದಲ್ಲಿ ರಸ್ತೆ ಬದಿಯ ಅಂಗಡಿ ಮತ್ತು ಮರವೊಂದರ ನಡುವೆ ವೇಗದಲ್ಲಿ ಸ್ಕೂಟರ್​​​ ಚಲಾಯಿಸಿದ್ದಾನೆ.

ರಸ್ತೆ ದಾಟಲು ಹೋಗಿ ಕಾರಿನಡಿ ಬಿದ್ದ ಬಾಲಕ, ಪವಾಡ ಸದೃಶ ಅಪಾಯದಿಂದ ಪಾರು

ಈ ಸ್ಕೂಟರ್​ ಸವಾರ ಮೊದಲು ಬಸ್​​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಂಡು, ನಂತರ ಚಾಕಚಕ್ಯತೆಯಿಂದ ಪಕ್ಕದ ಇಂಡೋ ಫಿಶರಿಷ್ ಸಂಸ್ಥೆಯ ಗೇಟಿಗೆ ಬಡಿದು ಮರದ ನಡುವೆ ಚಲಿಸಿ ಪಾರಾಗಿದ್ದಾನೆ. ಸಂಸ್ಥೆಯ ಮೂರು ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.  

ಈ ಎಲ್ಲಾ ವಿಡಿಯೋಗಳಲ್ಲಿಯೂ ಆತ ಅತೀ ವೇಗದಲ್ಲಿ ಚಲಿಸುತ್ತಿರುವುದು ಕಂಡು ಬಂದಿದೆ. ಒಟ್ಟಿನಲ್ಲಿ ಈತನ ಆಯಸ್ಸು ಅದೃಷ್ಟ ಎರಡು ಚೆನ್ನಾಗಿದ್ದು, ಈತ ಎರೆಡೆರಡು ಅಪಾಯಗಳು ಎದುರೆದುರೆ ಎದುರಾದರೂ ಯಾವುದೇ ತೊಂದರೆ ಇಲ್ಲದೇ ಪಾರಾಗಿದ್ದಾನೆ.

click me!