
ಪಿಟಿಐ ಅಗರ್ತಲಾ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಬುಧವಾರ ಜಂಟಿಯಾಗಿ ವರ್ಚುವಲ್ ವಿಧಾನದಲ್ಲಿ ಎರಡೂ ದೇಶಗಳ ನಡುವಿನ 3 ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅದರಲ್ಲಿ ತ್ರಿಪುರಾದ ನಿಶ್ಚಿಂತಪುರ (Nishchintapur) ಮತ್ತು ನೆರೆಯ ದೇಶದ ಗಂಗಾಸಾಗರ (Gangasagar) ನಡುವಿನ ಅಖೌರಾ-ಅಗರ್ತಲಾ ರೈಲ್ವೆ ಲಿಂಕ್ ಯೋಜನೆ ಪ್ರಮುಖವಾಗಿದೆ. ಇದು ತ್ರಿಪುರಾವನ್ನು ಕೋಲ್ಕತಾಗೆ ಇನ್ನಷ್ಟು ಹತ್ತಿರ ಮಾಡಲಿದೆ.
ಮೋದಿ ಮತ್ತು ಹಸೀನಾ ಉದ್ಘಾಟಿಸಿದ ಇತರ ಎರಡು ಯೋಜನೆಗಳೆಂದರೆ, 65 ಕಿ.ಮೀ. ಖುಲ್ನಾ-ಮೊಂಗ್ಲಾ ಪೋರ್ಟ್ ರೈಲು ಮಾರ್ಗ (Khulna-Mongla Port railway line) ಮತ್ತು ಬಾಂಗ್ಲಾದೇಶದ ರಾಂಪಾಲ್ನಲ್ಲಿ ಭಾರತದ ಸಹಯೋಗದಲ್ಲಿ ನಿರ್ಮಿಸಲಾಗಿರುವ ಮೈತ್ರಿ ಸೂಪರ್ ಥರ್ಮಲ್ ಪವರ್ ಪ್ಲಾಂಟ್ನ 2ನೇ ಘಟಕ. ಈ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, 'ರೈಲ್ ಲಿಂಕ್ ಯೋಜನೆಯು ಐತಿಹಾಸಿಕವಾಗಿದ್ದು, ಇದು ಭಾರತ-ಬಾಂಗ್ಲಾದೇಶ ನಡುವಿನ ಮೊದಲ ರೈಲು ಲಿಂಕ್ ಯೋಜನೆ ಆಗಿದೆ' ಎಂದರು.
ರೈಲು ಲಿಂಕ್ ಯೋಜನೆಯ ಮಹತ್ವವೇನು?:
ಪ್ರಸ್ತುತ, ಕೋಲ್ಕತ್ತಾದಿಂದ ತ್ರಿಪುರಾದ ರಾಜಧಾನಿ ಅಗರ್ತಲಾಕ್ಕೆ ರೈಲಿನ ಮೂಲಕ ಪ್ರಯಾಣಿಸುವವರು ಅಸ್ಸಾಂ ಮೂಲಕ ಸಾಗಬೇಕು. ಇದು 38 ಗಂಟೆಗಳ ಸುದೀರ್ಘ ಪ್ರಯಾಣವಾಗಿದೆ. ಈಗ ಅಖೌರಾ-ಅಗರ್ತಲಾ ಕ್ರಾಸ್ ಬಾರ್ಡರ್ ರೈಲು (Akhaura-Agartala cross border rail link) ಸಂಪರ್ಕದೊಂದಿಗೆ ರೈಲುಗಳು ಕೋಲ್ಕತಾದಿಂದ ಬಾಂಗ್ಲಾದೇಶ ಮೂಲಕ ಅಗರ್ತಲಾಕ್ಕೆ ಚಲಿಸಬಹುದಾಗಿದೆ. ಇದರಿಂದ ಕೋಲ್ಕತಾದಿಂದ ತ್ರಿಪುರಾಗೆ ಪ್ರಯಾಣ ಅವಧಿ 38 ತಾಸಿನಿಂದ 12 ತಾಸಿಗೆ ಇಳಿಯುತ್ತದೆ.
ಗೆಳತಿ ಜಾಸ್ಮಿನ್ ಜೊತೆ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ನಿಶ್ಚಿತಾರ್ಥ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ