
ಜೆರುಸಲೇಂ: ‘ಇಡೀ ವಿಶ್ವದ ಒಳಿತಿಗಾಗಿ ನಾವು ಇರಾನ್ ವಿರುದ್ಧ ಹೋರಾಡುತ್ತಿದ್ದೇವೆ. ಯುದ್ಧದಲ್ಲಿ ನಮ್ಮನ್ನು ಬೆಂಬಲಿಸಿ’ ಎಂದು ವಿಶ್ವದ ದೇಶಗಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮನವಿ ಮಾಡಿದ್ದಾರೆ.
ಇರಾನ್ ದಾಳಿಗೆ ಒಳಗಾದ ಅರಾದ್ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದ ಅವರು, ‘ಶನಿವಾರ ಇರಾನ್ 4000 ಕಿ.ಮೀ. ಸಾಗುವ ಕ್ಷಿಪಣಿ ಹಾರಿಸಿದೆ. ಇದು ಅದರ ರಹಸ್ಯ ಶಸ್ತ್ರಾಸ್ತ್ರ ಭಂಡಾರದ ಸಂಕೇತ. ಇರಾನ್ನ ಅಪಾಯದ ಬಗ್ಗೆ ಈ ಕ್ಷಿಪಣಿಯೇ ಸಾಕ್ಷಿ. ಇದು ಇಡೀ ವಿಶ್ವಕ್ಕೇ ಮಾರಕ. ಅದಕ್ಕೆಂದೇ ವಿಶ್ವದ ಪರವಾಗಿ ನಾವು ಹೋರಾಡುತ್ತಿದ್ದೇವೆ’ ಎಂದರು.
ಟೆಲ್ ಅವೀವ್: ‘4000 ಕಿ.ಮೀ. ಸಾಗುವ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಅಮೆರಿಕದ ಡಿಯಾಗೋ ಸೇನಾ ನೆಲೆ ಮೇಲೆ ದಾಳಿ ಮಾಡಿದ್ದ ಇರಾನ್, ಅಮೆರಿಕ- ಇಸ್ರೇಲ್ಗಳ ಮೇಲಷ್ಟೇ ಅಲ್ಲ. ಯುರೋಪ್ ರಾಷ್ಟ್ರಗಳ ಮೇಲೆಯೂ ಕಣ್ಣಿಟ್ಟಿದೆ’ ಎಂದು ಇಸ್ರೇಲ್ ಎಚ್ಚರಿಸಿದೆ, ಇರಾನ್ ಹಿಂದೂ ಮಹಾಸಾಗರದಲ್ಲಿರುವ ಅಮೆರಿಕದ ಸೇನಾ ನೆಲೆ ಡಿಯಾಗೋ ಗಾರ್ಸಿಯಾ ಮೇಲೆ 4000 ಕಿ.ಮೀ ಕ್ಷಿಪಣಿ ಹಾರಿಸಿ ದಾಳಿ ಮಾಡಿದ ಬೆನ್ನಲ್ಲೇ ಇಸ್ರೇಲ್ ಸೇನಾ ಮುಖ್ಯಸ್ಥ ಇಯಾಲ್ ಜಮೀರ್ ಈ ಬಗ್ಗೆ ಮಾತನಾಡಿದ್ದಾರೆ,‘ಇರಾನ್ ಇದೇ ಮೊದಲ ಬಾರಿಗೆ ಇಷ್ಟು ದೂರ ಸಾಮರ್ಥ್ಯವಿರುವ ಕ್ಷಿಪಣಿ ಹಾರಿಸಿದೆ. ಇದು ಇಸ್ರೇಲ್ ಅನ್ನು ಹೊಡೆಯುವ ಉದ್ದೇಶ ಹೊಂದಿರಲಿಲ್ಲ, ಅವರ ಗುರಿ ಬರ್ಲಿನ್, ಪ್ಯಾರಿಸ್, ರೋಮ್ನಂತಹ ಯುರೋಪಿಯನ್ ರಾಜ್ಯಗಳ ರಾಜಧಾನಿ ತಲುಪುವುದು ಹಾಗೂ ಅಲ್ಲಿಯೂ ಬೆದರಿಕೆ ಹಾಕುವುದು’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ