ದುಬೈನಲ್ಲಿ ಪೂಜೆ ಸಲ್ಲಿಸಿದ ಪ್ರಥಮ್, ಗೋಪೂಜೆ ಮಾಡಿ ಶಿವಣ್ಣನ ಆರೋಗ್ಯಕ್ಕೆ ಪ್ರಾರ್ಥನೆ!

ದುಬೈನಲ್ಲಿ ಪೂಜೆ ಸಲ್ಲಿಸಿದ ಪ್ರಥಮ್, ಗೋಪೂಜೆ ಮಾಡಿ ಶಿವಣ್ಣನ ಆರೋಗ್ಯಕ್ಕೆ ಪ್ರಾರ್ಥನೆ!

Published : Dec 02, 2024, 03:17 PM IST

ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ತಮ್ಮ ತಂಡಕ್ಕೆ ಶಿವಣ್ಣ ಕೊಟ್ಟ ಪ್ರೋತ್ಸಾಹ ಕಂಡು ಪ್ರಥಮ್ ಅಂಡ್ ಟೀಂ ಖುಷಿ ಪಟ್ಟಿತ್ತು. ಶಿವಣ್ಣ ದಂಪತಿಯನ್ನ ಸನ್ಮಾನಿಸಿ, ಪ್ರೀತಿಯ ಉಡುಗೊರೆಯನ್ನ ಕೊಟ್ಟು ಕಳುಹಿಸಿತ್ತು...

ಬಿಗ್ ಬಾಸ್ ವಿನ್ನರ್ ಪ್ರಥಮ್ (Actor Pratham) ನಟನೆ-ನಿರ್ದೇಶನದ 'ಕರ್ನಾಟಕದ ಅಳಿಯ' ಸಿನಿಮಾದ ಸೆಟ್​ಗೆ ಸೆಂಚೂರಿ ಸ್ಟಾರ್ ಶಿವರಾಜ್​ಕುಮಾರ್ ವಿಸಿಟ್ ಕೊಟ್ಟು ಟೀಮ್​ಗೆ ಆಲ್ ದಿ ಬೆಸ್ಟ್ ಹೇಳಿದ್ರು. ಇದೀಗ ಅದಕ್ಕೆ ಪ್ರತಿಯಾಗಿ ಪ್ರಥಮ್ ಶಿವಣ್ಣನಿಗೊಂದು ಗಿಪ್ಟ್ ಕೊಟ್ಟಿದ್ದಾರೆ. ಏನದು ಗಿಫ್ಟ್ ಈ ಸ್ಟೋರಿ ನೋಡಿ.

ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಟನೆ-ನಿರ್ದೇಶನದಲ್ಲಿ ಕರ್ನಾಟಕದ ಅಳಿಯ  ಅನ್ನೋ ಸಿನಿಮಾ ಬರ್ತಾ ಇದೆ. ಕೆಲ ದಿನಗಳ ಹಿಂದೆ ಈ ಸಿನಿಮಾದ ಸೆಟ್ ಗೆ ಡಾ.ಶಿವರಾಜ್​ ಕುಮಾರ್ ಭೇಟಿ ಕೊಟ್ಟಿದ್ರು. ಪತ್ನಿ ಸಮೇತ ಶೂಟಿಂಗ್ ಸೆಟ್​​ಗೆ ವಿಸಿಟ್ ಕೊಟ್ಟು ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ರು.

ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ತಮ್ಮ ತಂಡಕ್ಕೆ ಶಿವಣ್ಣ ಕೊಟ್ಟ ಪ್ರೋತ್ಸಾಹ ಕಂಡು ಪ್ರಥಮ್ ಅಂಡ್ ಟೀಂ ಖುಷಿ ಪಟ್ಟಿತ್ತು. ಶಿವಣ್ಣ ದಂಪತಿಯನ್ನ ಸನ್ಮಾನಿಸಿ, ಪ್ರೀತಿಯ ಉಡುಗೊರೆಯನ್ನ ಕೊಟ್ಟು ಕಳುಹಿಸಿತ್ತು.

ಮತ್ತೀಗ ಶಿವಣ್ಣನಿಗಾಗಿ ಪ್ರಥಮ್ ಮತ್ತೊಂದು ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ಇತ್ತೀಚಿಗೆ ರಾಜ್ ಕಪ್ ಆಡಲಿಕ್ಕಾಗಿ ದುಬೈಗೆ ಹೋಗಿದ್ದ ಪ್ರಥಮ್ ಅಲ್ಲಿನ ಹಿಂದೂ ಮಂದಿರಕ್ಕೆ ಭೇಟಿ ಕೊಟ್ಟು ಶಿವರಾಜ್​ಕುಮಾರ್ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಅಲ್ಲಿನ ಗೋಶಾಲೆಗೆ ತೆರಳಿ ಗೋವುಗಳಿಗೆ ಗೋಗ್ರಾಸ ನೀಡಿದ್ದಾರೆ. ಶಸ್ತ್ರಚಿಕಿತ್ಸೆಗಾಗಿ ವಿದೇಶಕ್ಕೆ ಹೊರಟು ನಿಂತಿರೋ ಶಿವಣ್ಣನಿಗೆ ಒಳ್ಳೆದಾಗಲಿ.. ಅವರ ಆರೋಗ್ಯ, ಆಯಸ್ಸು ಹೆಚ್ಚಲಿ ಅಂತ ಪ್ರಾರ್ಥನೆ ಮಾಡಿದ್ದಾರೆ. 

ಶಿವರಾಜ್​ಕುಮಾರ್ ಆರೋಗ್ಯಕ್ಕಾಗಿ ಪ್ರಾರ್ಥಿಸ್ತಾ ಇರೋರು ಒಬ್ಬಬ್ಬಿರಲ್ಲ. ಕೋಟಿ ಕೋಟಿ ಅಭಿಮಾನಿಗಳು ಶಿವಣ್ಣ ಗುಣವಾಗಲಿ ಅಂತ ಹಾರೈಸ್ತಾ ಇದ್ದಾರೆ. ಇವರೆಲ್ಲರ ಹಾರೈಕೆಯೇ ಶಿವಣ್ಣನಿಗೆ ಶ್ರೀರಕ್ಷೆ ಅಂದ್ರೆ ತಪ್ಪಾಗಲ್ಲ.

25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!