ಬೆಂಗಳೂರಿಗೆ ಬೆಂಕಿ ಇಟ್ಟವರು ಅಮಾಯಕರಂತೆ; ಪೊಲೀಸ್‌ ಸ್ಟೇಷನ್ ಮುಂದೆ ಪೋಷಕರ ಹೈಡ್ರಾಮಾ

Aug 16, 2020, 4:02 PM IST

ಬೆಂಗಳೂರು (ಆ. 16): ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪುಂಡರ ಹೆಡೆಮುರಿ ಕಟ್ಟಿದ್ದಾರೆ. ಸುಮಾರು 350 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇದೀಗ ಕೆಜೆ ಹಳ್ಳಿ ಪೊಲೀಸ್ ಸ್ಟೇಷನ್ ಎದುರು ಹೈಡ್ರಾಮಾ ನಡೆದಿದೆ. ನಮ್ಮ ಅಣ್ಣ, ತಮ್ಮ ಹಾಗೂ ಗಂಡನನ್ನು ಅನವಶ್ಯಕವಾಗಿ ಅರೆಸ್ಟ್ ಮಾಡಿದ್ದಾರೆ. ಅವರಿಗೂ, ಗಲಭೆಗೂ ಯಾವುದೇ ಸಂಬಂಧ ಇಲ್ಲ. ಅವರೆಲ್ಲಾ ಅಮಾಯಕರು' ಎಂದು ಸಾಕಷ್ಟು ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಮೀರ್ ಆಯ್ತು, ಈಗ ಪೋಷಕರು ಅಮಾಯಕರ ಪಟ್ಟ ಕಟ್ಟಿದ್ದಾರೆ. ಪೊಲೀಸರ ಮೇಲೆ ಗೂಬೆ ಕೂರಿಸಿದ್ದಾರೆ. 

'ರಾಮಮಂದಿರ ಶಿಲಾನ್ಯಾಸ ಸಹಿಸದೇ ಬೆಂಗಳೂರಲ್ಲಿ ಗಲಭೆ ಸೃಷ್ಟಿ'