Jun 26, 2022, 4:09 PM IST
ಏಷ್ಯಾನೆಟ್ ಸುವರ್ಣ ನ್ಯೂಸ್ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ನ್ಯೂಸ್ ಅವರ್'ಗೆ (News Hour) ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಅತಿಥಿಯಾಗಿ ಆಗಮಿಸಿದ್ದರು. ಫೈರ್ ಬ್ರಾಂಡ್ ಎಂದೇ ಹೆಸರಾದ ಪ್ರತಾಪ್ ಸಿಂಹ, ಚರ್ಚಾ ಕಾರ್ಯಕ್ರಮದಲ್ಲೂ ಅಷ್ಟೇ ಪ್ರಖರವಾಗಿ ಮಾತನಾಡಿದರು. ಉತ್ತರ ಕೊಟ್ಟರು. ಪ್ರತಾಪ್ ಸಿಂಹ ಪ್ರಚಾರಪ್ರಿಯರಾ.? ಇಮೇಜ್ ಕಡಿಮೆ ಆಗ್ತಾ ಇದೆಯಾ.? ಗೆಲುವಿಗೆ ಕಾರಣ ಮೋದಿನಾ, ಬಿಜೆಪಿನಾ..? ಬೆತ್ತಲೆ ಜಗತ್ತು ಬರೆಯುತ್ತಾ ಇದ್ದಿದ್ರು ರಾಜಕೀಯ ಸೇರುವುದಕ್ಕಾ..? ಈ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದರು.
ಮೋದಿ ವಿರೋಧಿಸುವವರು ದೇಶದ್ರೋಹಿಗಳಾ? ಮೋದಿ ಎದುರು ರಾಜ್ಯ ಸಂಸದರು ಯಾಕೆ ಮಾತಾಡಲ್ಲ..?
ಪ್ರತಾಪ್ ಸಿಂಹ ಟ್ರೋಲ್ಗಳಿಗೆ ಹೆದರಿದ್ರಾ.? ಸಿದ್ದರಾಮಯ್ಯ ವಿರುದ್ಧ ಮಾತಾಡ್ತಾರೆ, ದೇವೇಗೌಡ್ರ ವಿರುದ್ಧ ಮಾತಾಡಲ್ಲ ಯಾಕೆ.? ಟಿಪ್ಪು ಸುಲ್ತಾನ್ ಅಂದ್ರೆ ಉರಿದು ಬೀಳೋದ್ಯಾಕೆ..? ಇಂತಹ ಪ್ರಶ್ನೆಗಳಿಗೆ ಪ್ರತಾಪ್ ಸಿಂಹ ಉತ್ತರ ಹೀಗಿದೆ.