ಆಕ್ಸಿಜನ್, ರೆಮ್ಡಿಸ್‌ವಿರ್ ಪೂರೈಕೆಗೆ ವಾರ್‌ ರೂಂ ಸ್ಥಾಪನೆ: ಡಾ. ಸುಧಾಕರ್ ಭರವಸೆ

Apr 21, 2021, 4:25 PM IST

ಬೆಂಗಳೂರು (ಏ. 21): ರಾಜಧಾನಿಯಲ್ಲಿ ಆಕ್ಸಿಜನ್ ಕೊರತೆ ಇದೆ, ಬೆಡ್‌ ಕೊರತೆ ಇದೆ ಎನ್ನುವ ದೂರಿನ ಮಧ್ಯೆ ಆರೋಗ್ಯ ಸಚಿವ ಡಾ. ಸುಧಾಕರ್ ಭರವಸೆಯ ಮಾತುಗಳನ್ನಾಡಿದ್ದಾರೆ. 

ಬೆಂಗ್ಳೂರಿಗೆ ಆಕ್ಸಿಜನ್ ಕೊರತೆ ಆಗಲ್ಲ, ಭರವಸೆ ನೀಡಿದ ತೇಜಸ್ವಿ ಸೂರ್ಯ

ಆಕ್ಸಿಜನ್, ರೆಮ್ಡಿಸ್‌ವಿರ್ ಪೂರೈಕೆಗೆ ವಾರ್‌ ರೂಂ ಸ್ಥಾಪನೆ ಮಾಡಿದ್ದೇವೆ. ಅಗತ್ಯ ಔಷಧಿಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಚೈನ್ ಬ್ರೇಕ್ ಮಾಡಲು 14 ದಿನ ಬೇಕು. ಹಾಗಾಗಿ 14 ದಿನ ಟಫ್‌ರೂಲ್ಸ್ ಜಾರಿಗೆ ತಂದಿದ್ದೇವೆ. ಎಲ್ಲರೂ ಇದರನ್ವಯ ನಡೆದುಕೊಳ್ಳಬೇಕು' ಎಂದು ಹೇಳಿದ್ಧಾರೆ.