ಕಟೀಲ್ ಬಗ್ಗೆ ಅವಹೇಳನ: ಠಾಣೆ ಮೆಟ್ಟಿಲೇರಿದ ಕೈ-ಕಮಲ ವಾಕ್ ಕದನ

Oct 20, 2021, 9:39 AM IST

ಬೆಂಗಳೂರು (ಅ. 20): ಬಿಜೆಪಿ- ಕಾಂಗ್ರೆಸ್ ನಾಯಕರ ಮಧ್ಯೆ ವಾಕ್ಸಮರ ತಾರಕಕ್ಕೇರಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು ನೀಡಿದೆ. 

ಎಲ್ಲಪ್ಪಾ ಅಚ್ಛೇದಿನ್, ಸಿದ್ದು ಪ್ರಶ್ನೆಗೆ ದಾಖಲೆ ಸಮೇತ ಬೊಮ್ಮಾಯಿ ಉತ್ತರ!

ಕಾಂಗ್ರೆಸ್ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್, ಪೆಡ್ಲರ್' ಎಂದು ಕಟೀಲ್ ಹೇಳಿದ್ದು ಕಾಂಗ್ರೆಸ್ಸಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಕಟೀಲ್ ಮೆಚ್ಯೂರಿಟಿ ಇಲ್ಲದ ರಾಜಕಾರಣಿ, ಹುಚ್ಚಾಸ್ಪತ್ರೆಗೆ ಸೇರಿಸಬೇಕು, ಬೀದಿಗಿಳಿದು ಹೋರಾಟ ಮಾಡುತ್ತೇವೆ' ಎಂದೆಲ್ಲಾ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದರು.