ವಿಜಯಪುರದ ಬಬಲಾದಿ ಮಠಕ್ಕೆ ಕಾಲಜ್ಞಾನಿ ಸದಾಶಿವ ಅಜ್ಜನ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿದೆ.
ವಿಜಯಪುರ (ಜೂ. 08): ಇಲ್ಲಿನ ಬಬಲಾದಿ ಮಠಕ್ಕೆ ಕಾಲಜ್ಞಾನಿ ಸದಾಶಿವ ಅಜ್ಜನ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿದೆ. ಕೊರೋನಾ 2 ನೇ ಅಲೆ ಬಗ್ಗೆ 3 ತಿಂಗಳ ಹಿಂದೆ ಸದಾಶಿವ ಅಜ್ಜ ಭವಿಷ್ಯ ನುಡಿದಿದ್ದರು. ಇದೀಗ ಸೋಂಕು ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಮುತ್ಯಾರ ದರ್ಶನಕ್ಕೆ ಆಗಮಿಸಿದ್ದಾರೆ. ಮನೆಯಲ್ಲಿಯೇ ಪೂಜೆ ಮಾಡಿ ಎಂದರೂ ಭಕ್ತರು ಕೇಳುತ್ತಿಲ್ಲ.