ಬೆಂಗಳೂರಿನಿಂದ ವಿಜಯಪುರಕ್ಕೆ ಬಂದ ದಂಪತಿ; ಬಸ್‌ ಇಲ್ಲದೇ ಪರದಾಟ

Jul 12, 2020, 11:56 AM IST

ಬೆಂಗಳೂರು (ಜು. 12): ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಕೆಲಸವೂ ಲ್ಲ, ಹಣವೂ ಇಲ್ಲ, ಬದುಕೋದೇ ಕಷ್ಟವಾಗುತ್ತಿದೆ ಎಂದು ದಂಪತಿಯೊಬ್ಬರು ವಿಜಯಪುರಕ್ಕೆ ಬಂದಿದ್ದಾರೆ. ವಿಜಯಪುರದಲ್ಲಿ ಲಾಕ್‌ಡೌನ್ ಇರುವುದರಿಂದ  ಬಸ್‌ ನಿಲ್ದಾಣದಿಂದ ಮನೆಗೆ ಹೋಗಲು ಪರದಾಟ ನಡೆಸಿದ್ದಾರೆ. 

ಹೆಚ್ಚಾಗುತ್ತಿದೆ ಕೊರೊನಾ; ಬೆಂಗಳೂರಿನಿಂದ ವಲಸೆ ತಡೆಗೆ ಇದೊಂದೇ ಮಾರ್ಗೋಪಾಯ

ಈ ದಂಪತಿ ಸುವರ್ಣ ನ್ಯೂಸ್‌ ಜೊತೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಬಹಳ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಕೆಲಸವೂ ಇಲ್ಲ. ಲಾಕ್‌ಡೌನ್ ಇರುವುದರಿಂದ ಊರಿಗೆ ಬರುವುದೇ ಸೇಫ್ ಅಂತ ಊರಿಗೆ ಬಂದಿದ್ದೇವೆ ಎಂದಿದ್ದಾರೆ.