ಸುಮಲತಾ VS ದಳಪತಿಗಳು: ರವೀಂದ್ರ ಶ್ರೀಕಂಠಯ್ಯ ವಿರುದ್ಧ ಅಂಬಿ ಫ್ಯಾನ್ಸ್ ಮೀಟಿಂಗ್

Jul 9, 2021, 11:23 AM IST

ಬೆಂಗಳೂರು (ಜು. 09): ಸುಮಲತಾ VS ಎಚ್‌ಡಿಕೆ ಯುದ್ಧ ಮುಂದುವರೆದಿದೆ. ಸುಮಲತಾ ವಿರುದ್ಧ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಅಂಬಿ ಫ್ಯಾನ್ಸ್ ತಿರುಗಿ ಬಿದ್ದಿದ್ದಾರೆ. ಶ್ರೀರಂಗಪಟ್ಟಣದಲ್ಲಿಂದು ಅಭಿಮಾನಿಗಳು ಸಭೆ ನಡೆಸಿದ್ದಾರೆ. 

ಅಂಬರೀಷ್ ಕಾಲದಲ್ಲೇ ಅಕ್ರಮ ಗಣಿಗಾರಿಕೆ ನಡೆದಿತ್ತು ಎಂದು ರವೀಂದ್ರ ಶ್ರೀಕಂಠಯ್ಯ ಹೇಳಿದ್ದರು. ಶಾಸಕರ ವಿರುದ್ಧ ಹೋರಾಟ ಮಾಡಲು ಇಂದು ಪೂರ್ವಭಾವಿ ಸಭೆ ಕರೆದಿದ್ದಾರೆ.