ಅನುಶ್ರೀಯನ್ನು ಪ್ರಭಾವಿ ವ್ಯಕ್ತಿ, ಶುಗರ್ ಡ್ಯಾಡಿ ಬಚಾವ್ ಮಾಡ್ತಿದ್ದಾರೆ: ಸಂಬರ್ಗಿ

Sep 8, 2021, 2:39 PM IST

ಬೆಂಗಳೂರು (ಸೆ. 08): 'ಅನುಶ್ರೀ ವಿರುದ್ಧದ ಡ್ರಗ್ ಕೇಸ್ ಮರು ತನಿಖೆಯಾಗಬೇಕು. ಅನುಶ್ರೀಯವರನ್ನು ಮತ್ತೆ ವಿಚಾರಣೆಗೆ ಒಳಪಡಿಸಿದರೆ ಅರೆಸ್ಟ್ ಆಗುವುದು ಖಚಿತ. ಅನುಶ್ರೀಯನ್ನು ಪ್ರಭಾವಿ ವ್ಯಕ್ತಿ, ಶುಗರ್ ಡ್ಯಾಡಿ, ಮಾಜಿ ಮುಖ್ಯಮಂತ್ರಿಗಳು ಬಚಾವ್ ಮಾಡ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. 

ಅನುಶ್ರೀಗೆ ಡ್ರಗ್ ಟೆಸ್ಟ್, ಬ್ಲಡ್ ಟೆಸ್ಟ್ ಮಾಡಿಸಿಲ್ಲ ಯಾಕೆ.? ಇಂದ್ರಜಿತ್ ಪ್ರಶ್ನೆ

ಅನುಶ್ರೀ ಡ್ರಗ್ಸ್ ಸೇವನೆ ಜೊತೆ ಪೆಡ್ಲಿಂಗ್ ಕೂಡಾ ಮಾಡ್ತಿದ್ದರು ಎಂದು ತರುಣ್ ಹೇಳಿದ್ದಾರೆ. ತರುಣ್‌ನ್ನು ವೀಕ್ ಮಾಡಿದರೆ ಅನುಶ್ರೀ ಬಚಾವಾಗ್ತಾರೆ ಎಂದು ಪ್ಲ್ಯಾನ್ ಮಾಡಲಾಗಿದೆ. ತರುಣ್ ಹೆಸರು ಚಾರ್ಜ್‌ಶೀಟಲ್ಲಿ ಯಾಕಿಲ್ಲ..? ಎಂದು ಸಂಬರ್ಗಿ ಪ್ರಶ್ನಿಸಿದ್ದಾರೆ.