Mar 28, 2021, 9:50 AM IST
ಬೆಂಗಳೂರು (ಮಾ. 28): ಸೀಡಿ ರಾಸಲೀಲೆ ಪ್ರಕರಣದಲ್ಲಿ ಮಹಾನಾಯಕ ಯಾರು ಎಂಬ ಒಗಟಿಗೆ ಕಡೆಗೂ ಉತ್ತರ ಸಿಕ್ಕಿದೆ. 'ಈ ವರೆಗೆ ನಾನು ಹೇಳುತ್ತಿದ್ದ ಮಹಾನಾಯಕ ಯಾರೆಂದು ಯುವತಿಯ ಪೋಷಕರೇ ಹೇಳಿದ್ದಾರೆ. ಇಡೀ ಪ್ರಕರಣ ಡಿಕೆಶಿಯ ಷಡ್ಯಂತ್ರವಾಗಿದ್ದು ಕನಕಪುರದಲ್ಲಿ ಅವರನ್ನು ಸೋಲಿಸಲು ಪಣ ತೊಡುವೆ' ಎಂದಿದ್ದಾರೆ. 'ನನ್ನ ಬಳಿ ಇನ್ನೂ 11 ಸಾಕ್ಷ್ಯಗಳಿವೆ. ಅವೆಲ್ಲವನ್ನೂ ಎಸ್ಐಟಿಗೆ ನೀಡುತ್ತೇನೆ. ಡಿಕೆಶಿ ರಾಜಕಾರಣಕ್ಕೆ ನಾಲಾಯಕ್. ನಿವೃತ್ತಿ ಪಡೆಯುವುದು ಒಳ್ಳೆಯದು' ಎಂದು ಕುಟುಕಿದ್ದಾರೆ.
ಇಡೀ ಲೈಂಗಿಕ ವಿವಾದಕ್ಕೆ ಡಿಕೆಶಿ ಕಾರಣ; ಸಾಕ್ಷ್ಯ ಬಿಡುಗಡೆಯಾದರೆ ಕೇಸ್ ಉಲ್ಟಾ ಹೊಡೆಯುತ್ತಾ?