ಪ್ರವಾಹಕ್ಕೆ ತತ್ತರಿಸಿದ ಗೋಕಾಕ್; ಪರಿಹಾರ ಕೇಂದ್ರದಲ್ಲಿ ಬಾಣಂತಿ ಪರದಾಟ

Aug 20, 2020, 10:49 AM IST

ಬೆಳಗಾವಿ (ಆ. 20): ಕಳೆದ ಬಾರಿ ಪ್ರವಾಹ ಎಬ್ಬಿಸಿದ ಅವಾಂತರಗಳು, ಕರಾಳ ನೆನಪುಗಳು ಮಾಸುವ ಮುನ್ನ ಮತ್ತದೇ ಸ್ಥಿತಿ ಮರುಕಳುಹಿಸಿದೆ. ಗೋಕಾಕ್‌ನ ಮೆಳವಂಕಿ ಗ್ರಾಮಕ್ಕೆ ಘಟಪ್ರಭಾ ನೀರು ನುಗ್ಗಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಜನರನ್ನು ಪ್ರವಾಹ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಬಾಣಂತಿಯರು, ಹಸುಗೂಸುಗಳ ಗೋಳು ನೋಡತೀರದಾಗಿದೆ. ಇವರೆಲ್ಲರೂ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಕಿಟಕಿಗೆ ಸೀರೆ ಕಟ್ಟಿ ಹಸುಗೂಸನ್ನು ಮಲಗಿಸಲಾಗುತ್ತದೆ. ಬಾಣಂತಿಗೆ ಪೌಷ್ಠಿಕ ಆಹಾರವೂ ಸಿಗದೇ ಒದ್ದಾಡುತ್ತಿದ್ದಾರೆ. ಈ ದೃಶ್ಯಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ ನೋಡಿ..!

ಮಹಾಮಳೆಗೆ ನಲುಗಿದ 11 ರಾಜ್ಯಗಳು; ಎಲ್ಲಾ ಕಡೆ ಅವಾಂತರಗಳದ್ದೇ ಗೋಳು!