ಕ್ವಾರಂಟೈನ್ ತಪ್ಪಿಸಿಕೊಳ್ಳಲು ನೆರೆ ರಾಜ್ಯದವರ ಖತರ್ನಾಕ್ ಪ್ಲಾನ್; ಏನ್ಮಾಡ್ತಿದ್ದಾರೆ ನೋಡಿ..!

May 26, 2020, 12:00 PM IST

ಬೆಂಗಳೂರು (ಮೇ. 26): ಕ್ವಾರಂಟೈನ್‌ನಿಂದ ತಪ್ಪಿಸಿಕೊಳ್ಳಲು ಜನ ಏನೇನೋ ಸರ್ಕಸ್ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ನೆರೆಯ ರಾಜ್ಯಗಳಿಂದ ಕಂಟಕ ಎದುರಾಗುತ್ತಿದೆ. ತಮಿಳುನಾಡು ಆಯ್ತು, ಈಗ ಆಂಧ್ರದ ಜನರ ಸರದಿ. ಇವರು ಕ್ವಾರಂಟೈನ್ ತಪ್ಪಿಸಿಕೊಳ್ಳಲು ಖತರ್ನಾಕ್ ಪ್ಲಾನ್ ಮಾಡುತ್ತಿದ್ದಾರೆ. ಬಸ್ ಅಥವಾ ಸ್ವಂತ ವಾಹನದಲ್ಲಿ ಬಂದರೆ ಕ್ವಾರಂಟೈನ್ ಪಕ್ಕಾ! ಹಾಗಾಗಿ ಹಾಲಿನ ವ್ಯಾನ್‌ನಲ್ಲಿ ಬರುತ್ತಿದ್ದಾರೆ. ಪೊಲೀಸರ ಕಣ್ತಪ್ಪಿಸಿ ದೊಡ್ಡ ಹಾಲಿನ ವಾಹನದಲ್ಲಿ ಬೆಂಗಳೂರಿಗೆ ಎಂಟ್ರಿ ಕೊಡುತ್ತಿದ್ದಾರೆ. ಇದನ್ನು ಸ್ಥಳೀಯರು ಗಮನಿಸಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ರಾಜ್ಯದಲ್ಲಿ ಕೊರೋನಾ ಮಾತ್ರ ಇದ್ದವರಾರೂ ಸತ್ತಿಲ್ಲ!