Nov 27, 2021, 7:59 PM IST
ಬೆಂಗಳೂರು(ನ.27): ವಿದೇಶಗಳಲ್ಲಿ ಪತ್ತೆಯಾಗಿರುವ ಹೊಸ ಓಮಿಕ್ರಾನ್ ಡೆಡ್ಲಿ ವೈರಸ್ ಇದೀಗ ಭಾರತದ ಆತಂಕ ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೊರೋನಾ ಸಭೆ ಬಳಿಕ ಇದೀಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಹೊಸ ವೈರಸ್ ಅಪಾಯ ಹೆಚ್ಚಾಗಿರುವ ಕಾರಣ ಕಟ್ಟು ನಿಟ್ಟಿನ ಮಾರ್ಗಸೂಚಿಗೆ ಖಡಕ್ ಸೂಚನೆ ನೀಡಿದ್ದಾರೆ. ಸೋಮವಾರ ಮತ್ತೊಂದು ಸಭೆ ನಡೆಸಲು ಬೊಮ್ಮಾಯಿ ನಿರ್ಧರಿಸಿದ್ದಾರೆ. ಇಂದಿನ ಸಭೆಯಲ್ಲಿ ಬೊಮ್ಮಾಯಿ ನೀಡಿರುವ ಸೂಚನಗಳೇನು?