ನಾನ್‌ವೆಜ್ ಪ್ರಿಯರಿಗೆ ಶಾಕಿಂಗ್ ನ್ಯೂಸ್! ಕೆಜಿಗೆ ದುಪ್ಪಟ್ಟು ದರ ಹೆಚ್ಚಳ

May 25, 2020, 11:30 AM IST

ಬೆಂಗಳೂರು (ಮೇ. 25): ಆನೇಕಲ್‌ನಲ್ಲಿ ಲಾಕ್‌ಡೌನ್ ಉಲ್ಲಂಘನೆ ಮಾಡಿದ್ದಾರೆ. ತರಕಾರಿ ಮಾರುಕಟ್ಟೆಯಲ್ಲಿ ಜನವೋ ಜನ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲದೇ ಲಾಕ್‌ಡೌನ್‌ಗೆ ಡೋಂಟ್ ಕೇರ್ ಎಂದಿದ್ದಾರೆ. 

ಲಾಕ್‌ಡೌನ್ ಸಡಿಲಿಕೆಯಾದರೂ ಕಾರ್ಮಿಕರ ಪರದಾಟ ತಪ್ಪಿಲ್ಲ. ತವರಿಗೆ ತೆರಳಲು ಮೆಜೆಸ್ಟಿಕ್‌ಗೆ ಆಗಮಿಸಿದ ಕಾರ್ಮಿಕರು. ಊಟವಿಲ್ಲದೇ, ಸೂಕ್ತ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. 

ಒಂದು ವಾರ ಖಾಸಗಿ ಬಸ್‌ಗಳ ಉಚಿತ ಸಂಚಾರ

ವಿಜಯಪುರದಲ್ಲಿ ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್. ರಂಜಾನ್ ಹಿನ್ನಲೆಯಲ್ಲಿ ದರದಲ್ಲಿ ಹೆಚ್ಚಳ ಮಾಡಲಾಗಿದೆ.  ಕೆಜಿ ಚಿಕನ್‌ಗೆ 120 ರೂ ಬದಲು 240 ರೂ ವಸೂಲಿ ಮಾಡಲಾಗುತ್ತಿದೆ. 

ಗದಗದಲ್ಲಿ ಮಾಂಸ ಮಾರುಕಟ್ಟೆಯಲ್ಲಿ ಜನವೋ ಜನ. ಮಾಂಸಕ್ಕಾಗಿ ಜನ ಮುಗಿಬಿದ್ದಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರಕ್ಕೆ ಡೋಂಟ್ ಕೇರ್.