ಮೈಸೂರು ಅರಮನೆಯಲ್ಲಿ ಕಳೆಗಟ್ಟಿದೆ ಆಯುಧ ಪೂಜಾ ಸಂಭ್ರಮ

Oct 14, 2021, 10:24 AM IST

ಮೈಸೂರು (ಅ. 14): ಸಾಂಸ್ಕೃತಿಕ ನಗರಿಯಲ್ಲಿ ದಸರಾ ವೈಭವ ಕಳೆಗಟ್ಟಿದೆ. ಬೆಳಿಗ್ಗೆ 5.30 ರಿಂದ ಪೂಜಾ ವಿಧಿ ವಿಧಾನ ಆರಂಭವಾಗಿದೆ. ಪೂಜೆ ಬಳಿಕ ಸೋಮೇಶ್ವರ ದೇವಾಲಯದಿಂದ ಕಲ್ಯಾಣ ಮಂಟಪಕ್ಕೆ ಆಯುಧ ರವಾನೆಯಾಗುತ್ತದೆ. ಪಟ್ಟದ ಆನೆ, ಒಂಟೆ, ಹಸು, ಖಾಸಗಿ ಕಾರುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಮದುವಣಗಿತ್ತಿಯಂತೆ ಮೈಸೂರು ಕಂಗೊಳಿಸುತ್ತಿದೆ.