ಆರತಕ್ಷತೆ ದಿನ ನವಜೋಡಿಯಿಂದ ಮಹತ್ವದ ನಿರ್ಧಾರ; ಮಾದರಿಯಾಯ್ತು ನವಜೋಡಿಯ ನಡೆ

Nov 11, 2020, 4:49 PM IST

ಕೊಡಗು (ನ. 11): ಮದುವೆ ಆರತಕ್ಷತೆ ಅಂದ್ರೆ ಸಾಮಾನ್ಯವಾಗಿ ಉಡುಗೊರೆಗಳ ವಿನಿಮಯ, ಊಟ, ಮೋಜು, ಮಸ್ತಿ ಅಂತ ನೋಡುತ್ತೇವೆ. ಆದರೆ ಇದು ಸ್ವಲ್ಪ ಭಿನ್ನವಾದ ಮದುವೆ.  ನವಜೋಡಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ದೇಹದಾನಕ್ಕೆ ಸಹಿ ಮಾಡಿ ಮಾದರಿಯಾಗಿದ್ದಾರೆ. 

ಸಿದ್ದರಾಮಯ್ಯ ಭರ್ಜರಿ ಪ್ಲಾನ್: ಬೈ ಎಲೆಕ್ಷನ್‌ನಲ್ಲಿ 'ಜಾಣರಾಮಯ್ಯ' ಆದ್ರು..!

ಸೋಮವಾರ ಪೇಟೆಯ ಗೌತಮ್, ಅರಕಲಗೋಡುವಿನ ಸುಮನಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಆರತಕ್ಷತೆ ದಿನ ಕಾರ್ಯಕ್ರಮಕ್ಕೆ ಬಂದವರಿಗೆ ಒಂದೊಂದು ಸಸಿ, ಪುಸ್ತಕ ವಿತರಿಸಲಾಯಿತು. ನೇತ್ರದಾನದ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು.