ಬೊಮ್ಮಾಯಿ ಸಾಹೇಬ್ರು ಕ್ಯಾಪ್ಟನ್, 29 ಪ್ಲೇಯರ್ಸ್, ನೋಡುವವರು ಕರ್ನಾಟಕದ 7 ಕೋಟಿ ಜನ!

Aug 15, 2021, 4:28 PM IST

ಬೆಂಗಳೂರು (ಆ. 15): ಸಿಎಂ ಮೈಸೂರಿಗೆ ಭೇಟಿ ಕೊಟ್ಟಾಗ ಗೈರಾಗಿದ್ದೇಕೆ ಎಂಬುದಕ್ಕೆ ಕಾರಣವನ್ನು ಮುಚ್ಚಿದ ಲಕೋಟೆಯಲ್ಲಿ ಕೊಟ್ಟಿದ್ದರು ಶಾಸಕ ರಾಮದಾಸ್. ನಿನ್ನೆ ಸಿಎಂ ಬೊಮ್ಮಾಯಿಯವರನ್ನು ಭೇಟಿಯಾಗಿ ಲಕೋಟೆಯನ್ನು ಕೊಟ್ಟು ಕೊನೆಯವರೆಗೂ ಓದಲು ಹೇಳಿದ್ದರು. 'ಪತ್ರವನ್ನು ಕೊನೆಯವರೆಗೆ ಓದಲು ಹೇಳಿದ್ದೇನೆ. ಕೆಟ್ಟದಿರಬಹುದು, ಒಳ್ಳೆಯದಿರಬಹುದು, ನೋವಾಗಬಹುದು' ಎಂದು ರಾಮದಾಸ್ ಹೇಳಿದ್ದಾರೆ. 

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ: ಇಲ್ಲಿದೆ ಆರೋಪಿಗಳ ಇಂಟ್ರಸ್ಟಿಂಗ್ ಕಹಾನಿ

'ಸರ್ಕಾರವನ್ನು ಕ್ರಿಕೆಟ್ ತಂಡಕ್ಕೆ ಹೋಲಿಸಿದ್ದಾರೆ. ಕ್ಯಾಪ್ಟನ್‌ಗೆ ಯಾವ ಆಟಗಾರ ಬೇಕು ಎಂಬುದು ಗೊತ್ತಿರುತ್ತದೆ. ಬೊಮ್ಮಾಯಿ ಸಾಹೇಬ್ರು ಕ್ಯಾಪ್ಟನ್ ಆಗಿದ್ದಾರೆ. 29 ಪ್ಲೇಯರ್ಸ್ ಇದಾರೆ. ಕರ್ನಾಟಕದ 7 ಕೋಟಿ ಜನ ನೋಡುವವರಿದ್ದಾರೆ. ಮುಂದಿನ 19 ತಿಂಗಳಲ್ಲಿ ಉತ್ತಮ ಆಡಳಿತ ಕೊಡುವ ಜವಾಬ್ದಾರಿ ಅವರ ಮೇಲಿದೆ' ಎಂದಿದ್ಧಾರೆ.