ಸಂಪುಟದಲ್ಲಿ ಸಿಗದ ಸ್ಥಾನ: ಸಿಎಂ ಸ್ವಾಗತಕ್ಕೂ ಬಾರದೇ ಶಾಸಕ ರಾಮದಾಸ್ ಮುನಿಸು

Aug 9, 2021, 3:59 PM IST

ಬೆಂಗಳೂರು (ಆ. 09): ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ರಾಮದಾಸ್ ಮುನಿಸಿಕೊಂಡಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಸಿಎಂ ಸ್ವಾಗತಕ್ಕೆ ಆಗಮಿಸದೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿಗೂ ಬರದೇ ಮುನಿಸು ಹೊರ ಹಾಕಿದ್ಧಾರೆ. 'ನಾನು 25 ವರ್ಷಗಳಿಂದ ಪಕ್ಷಕ್ಕಾಗಿ ದುಡಿದರೂ ಪಕ್ಷ ನನ್ನನ್ನು ಗುರುತಿಸಿಲ್ಲ. ಇದರಿಂದ ಬಹಳ ಬೇಸರವಾಗಿದೆ' ಎಂದು ರಾಮದಾಸ್ ಆತ್ಮೀಯರ ಬಳಿ ಹೇಳಿಕೊಂಡಿದ್ದಾರೆ.

ಬೆನ್ಸನ್ ಟೌನ್ ಪ್ರಾಪರ್ಟಿ ಡೀಲ್: ನಿಜಾಮುದ್ದೀನ್ ಹೇಳಿಕೆಯಿಮದ ಜಮೀರ್‌ಗೆ ಸಂಕಷ್ಟ..? 

ರಾಮದಾಸ್ ನಡೆಗೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, 'ರಾಮದಾಸ್ ಅವರು ಪಕ್ಷದ ಹಿರಿಯರಿದ್ದಾರೆ. ಅವರನ್ನು ಕರೆದು ಮಾತನಾಡುತ್ತೇನೆ' ಎಂದಿದ್ಧಾರೆ.