ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಸುಳಿವು, ಕನಸು ಕಾಣಬೇಡಿ ಎಂದ ಆರ್ ಅಶೋಕ್..!

May 4, 2022, 9:49 AM IST

ಬೆಂಗಳೂರು (ಏ. 04): ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಗುದ್ದಾಟ ನಡೆಯುತ್ತಿದೆ. ಮತ್ತೆ ಸಿಎಂ ಬದಲಾವಣೆಯಾಗ್ತಾರೆ ಎಂದು ಯತ್ನಾಳ್ (Basavaraj Patil Yatnal) ಸುಳಿವು ನೀಡಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಪ್ರಧಾನಿ ಮೋದಿ (PM Modi) ನಿರ್ಣಯ ತೆಗೆದುಕೊಂಡಿದ್ದಾರೆ, ಮೇ 10 ರೊಳಗೆ ಎಲ್ಲವೂ ಗೊತ್ತಾಗಲಿದೆ ಎಂದು ಬಾಂಬ್ ಹಾಕಿದ್ದಾರೆ. 

'ಸಿಎಂ ಬದಲಾವಣೆ ಕೇವಲ ಊಹಾಪೋಹ, ನಾಯಕತ್ವ ಬದಲಾವಣೆ ಇಲ್ಲ' ಎಂದು ಮಾಜಿ ಸಿಎಂ ಯಡಿಯೂರಪ್ಪ (Yediyurappa) ಹೇಳಿದ್ದಾರೆ. ಸಿಎಂ ಬದಲಾವಣೆಯ ಕನಸು ಕಾಣಬೇಡಿ. ಸಿಎಂ ಬೊಮ್ಮಾಯಿ ಬದಲಾವಣೆ ಇಲ್ಲ. ಸಿಎಂ ಮೇಲೆ ವರಿಷ್ಠರ ಅಶೀರ್ವಾದವಿದೆ ಎಂದು ಯತ್ನಾಳ್‌ಗೆ ಆರ್ ಅಶೋಕ್ ಟಾಂಗ್ ನೀಡಿದ್ದಾರೆ.