ಕೊರೋನಾ ಲಸಿಕೆಗೆ ಹೆದರಿ ಮರವೇರಿದ ಭೂಪನನ್ನು ಕೆಳಗಿಳಿಸುವಲ್ಲಿ ಗ್ರಾಮಸ್ಥರು ಸುಸ್ತೋ ಸುಸ್ತು.!

Sep 2, 2021, 5:50 PM IST

ಬಳ್ಳಾರಿ (ಸೆ. 02): ಒಂದು ಕಡೆ ಲಸಿಕೆ ಕೊರತೆ, ಇನ್ನೊಂದು ಕಡೆ ಲಸಿಕೆ ಕೊಡುತ್ತೇವೆ ಬನ್ನಿ ಎಂದರೂ ಬಾರದ ಜನ..! ಕೊರೊನಾ ಲಸಿಕೆಗೆ ಹೆದರಿ ಭೂಪನೊಬ್ಬ ಮರವೇರಿ ಕುಳಿತಿದ್ದ ಘಟನೆ ಕುರುಗೋಡಿನ ಬೈಲೂರು ಗ್ರಾಮದಲ್ಲಿ ನಡೆದಿದೆ. 

ಕೊರೋನಾ ಮೀರಿಸಿದ ಡೇಂಜರ್ ವೈರಸ್, ಮೆದುಳಿಗೆ ನುಗ್ಗಿದ್ರೆ ಆಟ ಬಂದ್!

ಲಸಿಕೆ ಅಭಿಯಾನದ ಹಿನ್ನಲೆ ಗ್ರಾಮದ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿತ್ತು. ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತದೆಂದು  ಹೆದರಿದ ಹುಲೆಪ್ಪ ಎಂಬ ಯುವಕ ಮರವೇರಿ ಕುಳಿತಿದ್ದ. ಕೊನೆಗೆ ಗ್ರಾಮಸ್ಥರು ಮನವೊಲಿಸಿ ಮರದಿಂದ ಇಳಿಸಿ ಲಸಿಕೆ ಹಾಕಿಸಿದ್ದಾರೆ.