ವಿದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡ್ಬೇಡಿ..!

Jul 18, 2020, 5:08 PM IST

ಬೆಂಗಳೂರು(ಜು.18): ವಿದೇಶಗಳಿಂದ ಬಂದವರನ್ನು ಇಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು ದೇವನಹಳ್ಳಿಯ ಶಾಂತಿನಗರ ನಿವಾಸಿಗಳು ಆಗ್ರಹಿಸಿದ್ದಾರೆ. ಪ್ರತಿಭಟನೆ ಬೆನ್ನಲ್ಲೆ ಕ್ವಾರಂಟೈನ್ ಮಾಡಲು ಕರೆತಂದವರನ್ನು ಅಧಿಕಾರಿಗಳು ವಾಪಾಸ್ ಕರೆದುಕೊಂಡು ಹೋಗಿದ್ದಾರೆ.

ಇಲ್ಲಿನ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲು ಬಸ್‌ನಲ್ಲಿ 25 ಮಂದಿಯನ್ನು ಅಧಿಕಾರಿಗಳು ಕರೆ ತಂದಿದ್ದರು. ಈ ವೇಳೆ ಬಸ್ ತಡೆದು ಕ್ವಾರಂಟೈನ್ ಮಾಡಲು ವಿರೋಧಿಸಿದರು. ಇದರ ಜತೆಗೆ ತಹಶೀಲುದಾರರ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.

ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಶೇ 50% ಬೆಡ್‌ಗಳು ಮೀಸಲು

ವಿದೇಶದಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರನ್ನು ಏರ್‌ಲಿಫ್ಟ್ ಮೂಲಕ ಕರೆತರಲಾಗುತ್ತಿದೆ. ಇಂದು ಕೂಡಾ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವಂತಹ ಶಾಂತಿ ನಗರದಲ್ಲಿ ಕ್ವಾರಂಟೈನ್ ಮಾಡಲು ಅಧಿಕಾರಿಗಳು ಮುಂದಾಗಿದ್ದರು. ಆದರೆ ಸ್ಥಳೀಯರು ಅವಕಾಶ ಮಾಡಿಕೊಡಲಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.