ಹಿಜಾಬ್ ಕುರಿತಂತೆ ಭಾವನಾತ್ಮಕ ವಿಚಾರಣೆ ನಡೆಸುವುದಿಲ್ಲ, ಸಂವಿಧಾನವೇ ಭಗವದ್ಗೀತೆಯಿದ್ದಂತೆ, ಕೋರ್ಟ್ ಅದರ ಪ್ರಕಾರವೇ ನಡೆಯುತ್ತದೆ. ಈ ವಿಚಾರದ ಕುರಿತಂತೆ ಇತರೆ ನ್ಯಾಯಾಲಯಗಳ ತೀರ್ಪುಗಳನ್ನು ಸಮಗ್ರವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕಿದೆ ಎಂದು ರಾಜ್ಯ ಉಚ್ಛ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.
ಬೆಂಗಳೂರು(ಫೆ.09): ಹಿಜಾಬ್ ವಿವಾದ ಕರ್ನಾಟಕ ಹೈಕೋರ್ಟ್ (Karnataka High Court) ಮೆಟ್ಟಿಲೇರಿದ್ದು, ಮೊದಲ ದಿನ ಸುದೀರ್ಘ ವಿಚಾರಣೆ ನಡೆದಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಈ ವಿಚಾರಣೆ ಸಂಜೆ 4.30ರ ವರೆಗೂ ನಡೆಯವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ.
ಹಿಜಾಬ್ ಕುರಿತಂತೆ ಭಾವನಾತ್ಮಕ ವಿಚಾರಣೆ ನಡೆಸುವುದಿಲ್ಲ, ಸಂವಿಧಾನವೇ ಭಗವದ್ಗೀತೆಯಿದ್ದಂತೆ, ಕೋರ್ಟ್ ಅದರ ಪ್ರಕಾರವೇ ನಡೆಯುತ್ತದೆ. ಈ ವಿಚಾರದ ಕುರಿತಂತೆ ಇತರೆ ನ್ಯಾಯಾಲಯಗಳ ತೀರ್ಪುಗಳನ್ನು ಸಮಗ್ರವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕಿದೆ ಎಂದು ರಾಜ್ಯ ಉಚ್ಛ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.
ಇನ್ನು ಶಾಂತಿ ಕಾಪಾಡುವಂತೆ ವಿದ್ಯಾರ್ಥಿಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ. ಹೈಕೋರ್ಟ್ನಲ್ಲಿ ನಡೆದ ಹಿಜಾಬ್ ವಿಚಾರಣೆಯ (Hijab Hearing) ಕುರಿತಂತೆ ಲೆಫ್ಟ್ ರೈಟ್ & ಸೆಂಟರ್ನಲ್ಲಿ ಮೂಡಿಬಂದ ಚರ್ಚೆ ಹೀಗಿತ್ತು ನೋಡಿ.