'ನಾಳೆ ಬಸ್ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ, ನೌಕರರ ಪ್ರತಿಭಟನೆ ಬಗ್ಗೆ ಯಾವುದೇ ಗೊಂದಲ ಬೇಡ'

Feb 9, 2021, 5:48 PM IST

ಬೆಂಗಳೂರು (ಫೆ. 09): ನಾಳೆ ಬಸ್ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ. ನೌಕರರ ಪ್ರತಿಭಟನೆ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. 

ಒಂಭತ್ತು ಬೇಡಿಕೆಯಲ್ಲಿ ಐದು ಬೇಡಿಕೆಯನ್ನು ಈಡೇರಿಸಿದ್ದೇವೆ. ಜನವರಿ ತಿಂಗಳ ಅರ್ಧ ವೇತನವನ್ನು ಈಗಾಗಲೇ ನೀಡಿದ್ದೇವೆ. ಉಳಿದ ವೇತನವನ್ನು ಸದ್ಯದಲ್ಲೇ ನೀಡುತ್ತೇವೆ. ವೇತನದಲ್ಲಿ ಯಾವುದೇ ಕಡಿತ ಮಾಡುತ್ತಿಲ್ಲ. ವಾಸ್ತವ ಅರ್ಥ ಮಾಡಿಕೊಂಡು ಸಹಕರಿಸಿ ಎಂದು ಸವದಿ ಹೇಳಿದ್ದಾರೆ. 

ಕೊಂಡಿದ್ದು ನೂರು ರೂ. ಟಿಕೆಟ್...ಕೋಟಿ ಲಾಟರಿ ಗೆದ್ದ ಮಂಡ್ಯದ ಗಂಡು!