- ಸಂಕಷ್ಟದಲ್ಲಿರುವವರಿಗೆ ಸರ್ಕಾರದಿಂದ ಮತ್ತೆ .500 ಕೋಟಿ ನೆರವು-
- ಶಿಕ್ಷಕರು, ಆಶಾ, ಅಂಗನವಾಡಿ ಸಿಬ್ಬಂದಿ, ಅರ್ಚಕರು, ಮೀನುಗಾರರಿಗೆ ನೆರವು: ಸಿಎಂ
- ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್ ನಿಗದಿತ ಶುಲ್ಕದಿಂದ 2 ತಿಂಗಳು ವಿನಾಯಿತಿ
ಬೆಂಗಳೂರು (ಜೂ. 04): ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಸೆಮಿ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಜನರಿಗೆ ಮೊದಲ ಹಂತದಲ್ಲಿ 1,250 ಕೋಟಿ ರು.ಗಳ ವಿಶೇಷ ಪ್ಯಾಕೇಜ್ ನೀಡಿದ್ದ ರಾಜ್ಯ ಸರ್ಕಾರವು ಇದೀಗ ಎರಡನೇ ಹಂತದಲ್ಲಿ 500 ಕೋಟಿ ರು.ಗಳ ಪ್ಯಾಕೇಜ್ ಘೋಷಣೆ ಮಾಡಿದೆ.
ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ, ಅಚರ್ಚಕರು, ಮೀನುಗಾರರಿಗೆ 3 ಸಾವಿರ ರೂ ಪ್ಯಾಕೇಜ್ ಘೋಷಿಸಿದ್ದಾರೆ. ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್ ನಿಗದಿತ ಶುಲ್ಕದಿಂದ 2 ತಿಂಗಳು ವಿನಾಯಿತಿ ನೀಡಿದ್ದಾರೆ.