Hijab Row: ಮೌನವಾಗಿರುವಂತೆ ಡಿಕೆಶಿ ಸೂಚನೆ, ಪರ ಮಾತನಾಡುವಂತೆ ಸಿದ್ದರಾಮಯ್ಯ ಸಲಹೆ

Feb 12, 2022, 11:55 AM IST

ಬೆಂಗಳೂರು (ಫೆ. 12): ಹಿಜಾಬ್ ವಿವಾದದ ಬಗ್ಗೆ ಕಾಂಗ್ರೆಸ್ ನಾಯಕರ ನಡುವೆಯೇ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ. ಹಿಜಾಬ್ ಬಗ್ಗೆ ಮೌನವಾಗಿರುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೂಚನೆ ನೀಡಿದ್ದಾರೆ. ಅಲ್ಪಸಂಖ್ಯಾತರ ಪರ ವಾದಿಸುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. 

ಸಾಫ್ಟ್ ಹಿಂದುತ್ವ ಧೋರಣೆ ತಾಳಿದರೆ ಚುನಾವಣೆಯಲ್ಲಿ ಅನುಕೂಲವಾಗುತ್ತದೆ. ಮುಸ್ಲಿಂ ಓಲೈಕೆ ಪಕ್ಷ ಎಂಬ ಹಣೆಪಟ್ಟಿ ದೂರವಾಗುತ್ತದೆ. ಹಿಜಾಬ್‌ನಿಂದ ದೂರ ಉಳಿದರೆ ಹಿಂದೂ ಯುವಕರ ಮತಗಳನ್ನು ಸೆಳೆಯಬಹುದು ಎಂಬುದು ಡಿಕೆಶಿ ಲೆಕ್ಕಾಚಾರ.