ಅಭಿವೃದ್ಧಿಯ ಹರಿಕಾರ, ಕಷ್ಟಕ್ಕಾಗುವ ಧೀರ, ಕಲಬುರಗಿ ಕಟ್ಟಾಳು ದತ್ತಾತ್ರೇಯ ಪಾಟೀಲ್

Jun 10, 2020, 1:20 PM IST

ಬೆಂಗಳೂರು (ಜೂ. 10): ಇವರು ಚಿಕ್ಕ ವಯಸ್ಸಿನಲ್ಲಿಯೇ ಜನ ಸೇವೆಗೆ ಪಣತೊಟ್ಟ ಜನನಾಯಕ. ಇವರೆಂದರೆ ಇಡೀ ಊರಿಗೆ ಅಚ್ಚುಮೆಚ್ಚು. ಪ್ರೀತಿಯಿಂದ 'ಅಪ್ಪು' ಎನ್ನುತ್ತಾರೆ. ಇವರೇ ಕಲಬುರಗಿ ದಕ್ಷಿಣ ವಿಧಾನಸಭಾ ಮತ ಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್.

ಸಂಕಷ್ಟದಲ್ಲಿರುವವರ ಪಾಲಿಗೆ 'ರಾಮ'ನಾದ ಕೃಷ್ಣರಾಜ ಶಾಸಕ ರಾಮ್‌ದಾಸ್

ಲಾಕ್‌ಡೌನ್‌ ಸಮಯದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದ ತುಂಬೆಲ್ಲಾ ಓಡಾಡಿ ಜನರ ಕಷ್ಟಗಳನ್ನು ಅಲಿಸಿದರು. ಜೊತೆಗೆ ಕಷ್ಟಕ್ಕೆ ನೆರವಾದರು. ಜೊತೆಗೆ ತಮ್ಮದೇ ಆದ ತಂಡ ಕಟ್ಟಿ ಜನರ ನೆರವಿಗೆ ನಿಲ್ಲುವಂತೆ ಸೂಚಿಸಿದರು. ತಮ್ಮ ಸ್ವಂತ ಖರ್ಚಿನಲ್ಲಿ 25 ಸಾವಿರಕ್ಕೂ ಹೆಚ್ಚು ಫುಡ್ ಕಿಟ್ ತಯಾರಿಸಿ ಬಡವರಿಗೆ ಹಂಚಿದ್ದಾರೆ. ಜನರ ಅಚ್ಚುಮೆಚ್ಚಿನ ನಾಯಕ ಎನಿಸಿಕೊಂಡಿದ್ದಾರೆ. ಇವರು ಲಾಕ್‌ಡೌನ್ ಸಮಯದಲ್ಲಿ ಮಾತ್ರವಲ್ಲ, ಹಿಂದಿನಿಂದಲೂ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಇವರ ಸಮಾಜಮುಖಿ ಕಾರ್ಯಗಳ ಝಲಕ್ ಇಲ್ಲಿದೆ ನೋಡಿ..!