ಬಿಎಸ್‌ವೈ ಆಪ್ತರ ಮೇಲಿನ ಐಟಿ ರೈಡ್ : ಆಂತರಿಕ ಕಾರಣ ಎಂದ ಎಚ್‌ಡಿಕೆ

Oct 7, 2021, 1:18 PM IST

ಬೆಂಗಳೂರು (ಅ.07):  ಉಪ ಚುನಾವಣೆ ಹೊತ್ತಲ್ಲಿ ರಾಜ್ಯದಲ್ಲಿ ಐಟಿ ದಾಳಿ (IT Raid) ನಡೆದಿದೆ. ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ (BS Yediyurappa) ಆಪ್ತರ ಮೇಲೆ ನಡೆದ ದಾಳಿ ಬಿಎಸ್‌ವೈ ಮೇಲೆ ಹಿಡಿತ ಸಾಧಿಸಲು ನಡೆಸಿರಬಹುದು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (HD kumaraswamy) ಹೇಳಿದರು. 

ಬೆಂಗ್ಳೂರಲ್ಲಿ ಅತೀ ದೊಡ್ಡ ಐಟಿ ಬೇಟೆ: ಗುತ್ತಿಗೆದಾರರ ಬಳಿ ಭಾರೀ ಪ್ರಮಾಣದ ಸಂಪತ್ತು ಪತ್ತೆ..!

ಇದು ಬಿಜೆಪಿಯ ಆಂತರಿಕ ವಿಚಾರಗಳಿಂದ ನಡೆದಿರಬಹುದು. ಇದರ ಹಿಂದೆ ಹಲವು ಪ್ರಮುಖ ಕಾರಣ ಇದೆ ಎಮದು ಹೇಳಿದ್ದಾರೆ.  ನೀರಾವರಿ ನಿಗಮದ ಟೆಂಡರ್ ವಿಚಾರದಲ್ಲಿ ನಡೆದಿದೆ. ಟೆಂಡರ್‌ನಲ್ಲಿ ಗೋಲ್‌ಮಾಲ್‌ ನಡೆದಿದೆ ಎನ್ನುವ ಆರೋಪವು ಕೇಳಿ ಬಂದಿದೆ.