ಬೆಂಗ್ಳೂರು ಕೊರೊನಾ ಹಾಟ್‌ಸ್ಪಾಟ್; 'ವೈರಲ್‌ ಲೋಡ್'‌ನಿಂದ ಸೋಂಕು ಹೆಚ್ಚುವ ಭೀತಿ

ಬೆಂಗ್ಳೂರು ಕೊರೊನಾ ಹಾಟ್‌ಸ್ಪಾಟ್; 'ವೈರಲ್‌ ಲೋಡ್'‌ನಿಂದ ಸೋಂಕು ಹೆಚ್ಚುವ ಭೀತಿ

Suvarna News   | Asianet News
Published : Jul 20, 2020, 01:41 PM IST

ರಾಜ್ಯದಲ್ಲಿ ಕೊರೋನಾ ಸೋಂಕು ಲಕ್ಷಣವುಳ್ಳ (ಸಿಮ್ಟಮ್ಯಾಟಿಕ್‌) ಸೋಂಕಿತರ ಪ್ರಮಾಣ ತೀವ್ರವಾಗಿ ಹೆಚ್ಚಾಗುತ್ತಿದೆ. ಕೇವಲ ಒಂದು ತಿಂಗಳ ಹಿಂದೆ 100 ಮಂದಿ ಸಕ್ರಿಯ ಸೋಂಕಿತರಲ್ಲಿ ಕೇವಲ 3 ಮಂದಿ ಲಕ್ಷಣವುಳ್ಳವರಾಗಿದ್ದರೆ ಪ್ರಸ್ತುತ ಈ ಸಂಖ್ಯೆ 40 ಮಂದಿಗೆ ಹೆಚ್ಚಿದೆ.
 

ಬೆಂಗಳೂರು (ಜು. 20): ರಾಜ್ಯದಲ್ಲಿ ಕೊರೋನಾ ಸೋಂಕು ಲಕ್ಷಣವುಳ್ಳ (ಸಿಮ್ಟಮ್ಯಾಟಿಕ್‌) ಸೋಂಕಿತರ ಪ್ರಮಾಣ ತೀವ್ರವಾಗಿ ಹೆಚ್ಚಾಗುತ್ತಿದೆ. ಕೇವಲ ಒಂದು ತಿಂಗಳ ಹಿಂದೆ 100 ಮಂದಿ ಸಕ್ರಿಯ ಸೋಂಕಿತರಲ್ಲಿ ಕೇವಲ 3 ಮಂದಿ ಲಕ್ಷಣವುಳ್ಳವರಾಗಿದ್ದರೆ ಪ್ರಸ್ತುತ ಈ ಸಂಖ್ಯೆ 40 ಮಂದಿಗೆ ಹೆಚ್ಚಿದೆ.

ಇದಕ್ಕೆ ಮುಖ್ಯ ಕಾರಣ ವೈರಲ್‌ ಲೋಡ್‌ (ಸೋಂಕಿತರಲ್ಲಿ ಇರುವ ವೈರಾಣುವಿನ ಪ್ರಮಾಣ) ಹೆಚ್ಚಾಗುತ್ತಿರುವುದು. ಸೋಂಕಿತರಲ್ಲಿ ವೈರಲ್‌ ಲೋಡ್‌ ಹೆಚ್ಚಾಗಿರುವ ಪರಿಣಾಮ ಲಕ್ಷಣವುಳ್ಳ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಸೋಂಕು ಲಕ್ಷಣಗಳುಳ್ಳ ಸೋಂಕಿತರಿಂದಲೇ ಹೆಚ್ಚು ಮಂದಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಇನ್ನು ಮುಂದೆ ಇನ್ನೂ ವೇಗವಾಗಿ ಸೋಂಕು ಹರಡಬಹುದು. ಚೇತರಿಕೆ ವಿಳಂಬ ಆಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಜೂ.17ರವರೆಗೂ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಸೋಂಕಿತರಲ್ಲಿ ಕೇವಲ ಶೇ.3 ಮಂದಿಗೆ ಮಾತ್ರ ಸೋಂಕು ಲಕ್ಷಣಗಳಿತ್ತು. ಆದರೆ, ಈಗ ಈ ಸಂಖ್ಯೆ ಬದಲಾಗಿದ್ದು, ಪ್ರಸ್ತುತ ಸಕ್ರಿಯ ಸೋಂಕಿತರಲ್ಲಿ ಬರೋಬ್ಬರಿ ಶೇ.40ರಷ್ಟುಮಂದಿಗೆ ರೋಗ ಲಕ್ಷಣ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

 

18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?