ಹಳೆ ಹುಬ್ಬಳ್ಳಿ ಗಲಭೆ (Old Hubballi Riot) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ ಟಿ ರವಿ (CT Ravi) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ವಿರುದ್ಧ ಹರಿಹಾಯಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ (ಮೇ. 01): ಹಳೆ ಹುಬ್ಬಳ್ಳಿ ಗಲಭೆ (Old Hubballi Riot) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ ಟಿ ರವಿ (CT Ravi) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ವಿರುದ್ಧ ಹರಿಹಾಯಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.
'ಕಾಂಗ್ರೆಸ್-ಜಮೀರ್ ಗಲಭೆಕೋರರ ಓಲೈಕೆ ಮುಂದಾಗಿದ್ದಾರೆ. ವೋಟ್ ಬ್ಯಾಂಕ್ಗಾಗಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಗಲಭೆಕೋರರನ್ನು ಸೋದರರಂತೆ ಟ್ರೀಟ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸುವ ವೇಳೆ, ಗಲಭೆಕೋರರ ನಾಲ್ಕೈದು ತಲೆ ಹೋಗಿದ್ರೆ ಹುಬ್ಬಳ್ಳಿ ಶಾಂತವಾಗುತ್ತಿತ್ತು. ಮುಂದಿನ 25 ವರ್ಷ ಶಾಂತಿ ನೆಲೆಸುತ್ತಿತ್ತು. ಮುಂದಿನ 25 ವರ್ಷ ಶಾಂತಿ ನೆಲೆಸುತ್ತಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಿದ್ದಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ' ಎಂದು ಹೇಳಿಕೆ ನೀಡಿದ್ದಾರೆ.