ಸಾಹಿತಿ, ಪ್ರಗತಿಪರ ಚಿಂತಕರಿಗೆ ಜೀವ ಬೆದರಿಕೆ: ಹಿಂದೂ ಕಾರ್ಯಕರ್ತ ಶಿವಾಜಿ ರಾವ್‌ ಅರೆಸ್ಟ್!

Sep 30, 2023, 12:17 PM IST

ಬೆಂಗಳೂರು(ಸೆ.30):  ಸಾಹಿತಿ, ಪ್ರಗತಿಪರ ಚಿಂತಕರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ವೊಂದು ಸಿಕ್ಕಿದೆ. ಪೊಲೀಸರಿಗೆ ಚಾಲೆಂಜ್‌ ಆಗಿದ್ದಂತಹ ಪ್ರಕರಣವನ್ನ ಸಿಸಿಬಿ ಬೇಧಿಸಿದೆ. ಸಾಹಿತಿ, ಪ್ರಗತಿಪರ ಚಿಂತಕರಿಗೆ ಜೀವ ಬೆದರಿಕೆ ಪತ್ರ ಬರೆದಿದ್ದ ಕಿಂಗ್‌ಪಿನ್‌ನನ್ನ ಬಂಧಿಸಲಾಗಿದೆ. ದಾವಣಗೆರೆ ಮೂಲದ ಶಿವಾಜಿ ರಾವ್‌ ಯಾದವ್‌ನನ್ನ ಬಂಧಿಸಲಾಗಿದೆ. ಬಂಧಿತ ಶಿವಾಜಿ ರಾವ್‌ ಯಾದವ್‌ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದನಂತೆ. ಹಿಂದೂ ಧರ್ಮದ ವಿರುದ್ಧ ಮಾತನಾಡಿದರೆ ಈತ ಟಾರ್ಗೆಟ್‌ ಮಾಡುತ್ತಿದ್ದ. 

ನಟ ಪ್ರಕಾಶ್‌ ರಾಜ್‌ ಸೇರಿ ಹಲವರಿಗೆ ಜೀವ ಬೆದರಿಕೆ: ನಿಮ್ಮ ಕೊನೆಯ ‌ದಿನಗಳನ್ನು ಎಣಿಸಿ ಎಂದ ಅನಾಮಿಕ..!