'ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನಿ ಕನ್ನಡವಾಗಿರು'ಎಂಬಂತಿದ್ದರು ಡಾ. ರಾಜ್

Nov 2, 2020, 5:31 PM IST

'ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನಿ ಕನ್ನಡವಾಗಿರು' ಎನ್ನುವುದಕ್ಕೆ ಅನ್ವರ್ಥಕವಾಗಿರುವವರು ವರನಟ ಡಾ. ರಾಜ್‌ಕುಮಾರ್ . ಕನ್ನಡ ಭಾಷೆ, ನೆಲ, ಜಲದ ವಿಚಾರ ಬಂದಾಗ ಮುಲಾಜಿಲ್ಲದೇ ಹೋರಾಟಕ್ಕೆ ನಿಲ್ಲುತ್ತಿದ್ದರು.

ಕನ್ನಡವನ್ನು ಒಂದು ಭಾಷೆಯಾಗಿ ನೋಡಿಲ್ಲ, ಪ್ರೇಮಿಯಾಗಿ ಆರಾಧಿಸಿದ್ರು. ಭಕ್ತನಾಗಿ ಪೂಜಿಸಿದ್ರು. ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ಕೊಂಡೊಯ್ದರು. ಕನ್ನಡ ರಾಜ್ಯೋತ್ಸವ ಬಂದಾಗ ಡಾ. ರಾಜ್‌ರನ್ನು ನೆನೆಯದೇ ಇದ್ದರೆ ಅದು ಸಂಪೂರ್ಣವಾಗುವುದಿಲ್ಲ. ಡಾ. ರಾಜ್‌ಗೊಂದು ನಮನ ಸಲ್ಲಿಸುತ್ತಾ, ಅವರ ಕನ್ನಡ ಪ್ರೇಮವನ್ನು ತಿಳಿಯೋಣ!